ಹೊಸದಿಗಂತ ವರದಿ, ಬಳ್ಳಾರಿ:
ಗ್ರಾಮೀಣ ಠಾಣೆ ವ್ಯಾಪ್ತಿಯ ಅನಂತಪುರ ರಸ್ತೆಯ ಜನತಾ ಬಜಾರ್ ಪ್ರದೇಶದ ಮನೆಯೊಂದರಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಡಾವಣೆಯ ಪದ್ಮಾವತಿ ಎನ್ನುವವರ ಮನೆ ನುಗ್ಗಿದ ದುಷ್ಕರ್ಮಿಗಳು ಚಿನ್ನ, ಬೆಳ್ಳಿ ನಗದು ಹಣದೊಂದಿಗೆ ಇತ್ತಿಚೆಗೆ ಪರಾರಿಯಾಗಿದ್ದರು. ಈ ಕುರಿತು ಎಸ್ಪಿ ಸೈದಲು ಅಡಾವತ್, ಹೆಚ್ಚುವರಿ ಪೊಲೀಸ್ ಅಧಿಕಾರಿಗಳಾದ ಗುರುನಾಥ್ ಮತ್ತೂರ್ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಡಿವೈಎಸ್ಪಿ ಎಂ.ಜಿ.ಸತ್ಯನಾರಾಯಣ ರಾವ್, ಅವರ ನೇತೃತ್ವದಲ್ಲಿ ಗ್ರಾಮೀಣ ಠಾಣೆ ಪಿಎಸ್ಐ ನಿರಂಜನ್ ಸೇರಿದಂತೆ ನಾನಾ ಅದಿಕಾರಿಗಳ ತಂಡ ಮಂಜುನಾಥ್ ಎನ್ನುವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 132ಗ್ರಾಂ ಚಿನ್ನಾಭರಣ ಗಳನ್ನು ವಶಪಡಿಸಿಕೊಂಡು, ವಿಚಾರಣೆ ಮುಂದುವರೆಸಿದ್ದಾರೆ. ಅಧಿಕಾರಿಗಳ ಸಾಧನೆಗೆ ಎಸ್ಪಿ ಸೈದಲು ಅಡಾವತ್ ಅವರು ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆ.