ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆಶಿ ಅಧಿಕಾರ ಸ್ವೀಕರಿಸಿದ ಬಳಿಕ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗೆ ಹೆಜ್ಜೆಯನ್ನಿಟ್ಟರು.
ಇನ್ನೂ ಸಿಎಂ, ಡಿಸಿಎಂ ಆಗಮಿಸುತ್ತಿದ್ದಂತೆ ವಿಧಾನಸೌಧ ಸಿಬ್ಬಂದಿ ಇಬ್ಬರು ನಾಯಕರಿಗೂ ಹೃದಯಪೂರಕವಾಗಿ ಗೌರವ ಸೂಚಿಸಿದರು. ಹೂಗುಚ್ಛ, ಶಾಲು ಹೊದಿಸಿ ಶುಭ ಹಾರೈಸಿದರು.
ಜೊತೆಗೆ ಇಂದು ಹೊಸ ಸರ್ಕಾರದ ಮೊದಲ ಕ್ಯಾಬಿನಟ್ ಸಭೆ ನಡೆಯಲಿದೆ. ಇಂದೇ ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರೆಂಟಿಗಳನ್ನು ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದು, ಆದೇಶ ಜಾರಿಯಾಗುವ ಸಾಧ್ಯತೆಯಿದೆ.