ಹೊಸದಿಗಂತ ವರದಿ ಮಡಿಕೇರಿ:
ಗೋಮಾಂಸ ಮಾರಾಟಕ್ಕೆ ಯತ್ನಿಸಿದ ಇಬ್ಬರು ಕಾರ್ಮಿಕರನ್ನು ನಾಪೋಕ್ಲು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಪೋಕ್ಲು ಸಮೀಪದ ಚೋನಕರೆಯ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕರಾದ ಅಸ್ಸಾಂನ ಉದಲ್ ಗಿರಿ ನಿವಾಸಿಗಳಾದ ಶಹಜಾನ್ ಆಲಿ (40) ಹಾಗೂ ಸೈದುಲ್ ಇಸ್ಲಾಂ (22) ಅವರುಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಓರ್ವ ಪರಾರಿಯಾಗಿದ್ದು, 12 ಕೆ.ಜಿ ಗೋಮಾಂಸವನ್ನು ವಶಕ್ಕೆ ಪಡೆಯಲಾಗಿದೆ.
ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಸದಾಶಿವ, ಎಎಸ್ಐ ಕುಶಾಲಪ್ಪ, ಸಿಬ್ಬಂದಿಗಳಾದ ಪಂಚಲಿಂಗಪ್ಪ, ಲವಕುಮಾರ್, ಮಹೇಶ್, ಗಿರೀಶ್, ರವಿಕುಮಾರ್ ಹಾಗೂ ಚಾಲಕ ಬಾಲಕೃಷ್ಣ ಪಾಟೀಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂ ಸಂಘಟನೆಗಳ ಒತ್ತಾಯ: ನಾಪೋಕ್ಲು ಭಾಗದಲ್ಲಿ ಗೋಮಾಂಸ ಮಾರಾಟ ನಿರಂತರವಾಗಿದ್ದು, ಈ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಗಳ ಪ್ರಮುಖರಾದ ಜಾಲಿ ಪೂವಪ್ಪ ಹಾಗೂ ಅಮ್ಮಂಡ ಮನು ಮಹೇಶ್ ಆಗ್ರಹಿಸಿದ್ದಾರೆ.
ಸಂಘಟನೆಯ ಸಾಬು ನಾಣಯ್ಯ, ಕೇಟೋಳಿರ ಡಾಲಿ, ಅಚ್ಚಪ್ಪ, ಚಿಯಕಪೂವಂಡ ಸತೀಶ್, ಸುಕುಮಾರ ಹಾಜರಿದ್ದರು.