ಹೊಸದಿಗಂತ ವರದಿ ಬಾಗಲಕೋಟೆ :
ಬಾಗಲಕೋಟೆ ಹೋಳಿ ಹಬ್ಬ ನಗರದ ಸಾಂಸ್ಕ್ರತಿಕ ಅಸ್ಮೀತೆ ಪ್ರತಿಕವಾಗಿದ್ದು.ದೇಶದಲ್ಲಿಯೆ ಬಾಗಲಕೋಟೆ ಹೋಳಿ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆವಿಷಯ ಎಂದು ಶಾಸಕರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಐತಿಹಾಸಿಕ ಹೋಳಿ ಉತ್ಸವ ನಿಮಿತ್ಯ ನಗರದ ವಿನಾಯಕನಗರ ಬಡಾವಣೆಯಲ್ಲಿ ತೃತೀಯ ಬಾರಿಗೆ ಹಲಗೆ ಮೇಳ ಸ್ಪರ್ಧೆ ಗೆ ಹಲಗಿ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಹೋಳಿ ಉತ್ಸವ ಆಚರಣೆಯಲ್ಲಿ ದೇಶದಲ್ಲಿಯೆ ಎರಡನೆಯ ಸ್ಥಾನದಲ್ಲಿದೆ. ಇಂದು ವಿನಾಯಕ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು. ಮಹಾಬಳೇಶ ಗುಡಗುಂಟಿ ಮಾತನಾಡಿ, ಹೋಳಿ ಉತ್ಸವ ಆಚರಣೆಯ ದಿನಾಂಕ ಮತ್ತು ಪದ್ದತಿಯನ್ನು ತಿಳಿಸಿದರು.