ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರಿ ಸಂಚಲನ ಮೂಡಿಸಿದ ಬೆಂಗಳೂರಿನ “ಬೆಡ್ ಬ್ಲಾಕ್ ದಂಧೆ”ಯಲ್ಲಿ ಬಿಜೆಪಿ ಶಾಸಕರೊಬ್ಬರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಸ್ವತಃ ಬಿಜೆಪಿ ಶಾಸಕರ ಕೈವಾಡವಿರುವುದು ಸಾಬೀತಾಗಿದೆ. ತೋಳವೇ ಕುರಿ ಕಾಯುತ್ತಿರುವಾಗ ಸಂಸದ ತೇಜಸ್ವಿ ಸೂರ್ಯ ಆ ತೋಳವನ್ನೇ ಬಗ್ಗಲಲ್ಲಿಟ್ಟುಕೊಂಡು ಕಳ್ಳರನ್ನು ಹಿಡಿಯಲು ಹೋದ ಪ್ರಹಸನ ಅದ್ಭುತ ಎಂದು ಟೀಕಿಸಿದ್ದಾರೆ.
ಬಿಜೆಪಿ ನಾಯಕರಿಗೆ ಬೇರೆಯವರ ನೈತಿಕತೆಯ ಬಗ್ಗೆ ಮಾತನಾಡಲು ಯಾವ ಮುಖವಿದೆ? ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಸ್ವತಃ BJP ಶಾಸಕರ ಕೈವಾಡವಿರುವುದು ಸಾಬೀತಾಗಿದೆ.
ತೋಳವೇ ಕುರಿ ಕಾಯುತ್ತಿರುವಾಗ @Tejasvi_Surya ಆ ತೋಳವನ್ನೇ ಬಗ್ಗಲಲ್ಲಿಟ್ಟುಕೊಂಡು ಕಳ್ಳರನ್ನು ಹಿಡಿಯಲು ಹೋದ ಪ್ರಹಸನ ಅದ್ಭುತ.
BJP ಪಕ್ಷವೇ ಒಂದು ಕಳ್ಳರ ಸಂತೆ.
ಇಂತಹ BJP ನಾಯಕರಿಗೆ ಬೇರೆಯವರ ನೈತಿಕತೆಯ ಬಗ್ಗೆ ಮಾತನಾಡಲು ಯಾವ ಮುಖವಿದೆ? pic.twitter.com/dQWd3tnosH— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 6, 2021