ಹೊಸದಿಗಂತ ವರದಿ ಮೈಸೂರು:
ಮೈಸೂರು ಆಕಾಶವಾಣಿಯಿಂದ ಮೂರು ವರ್ಷಗಳ ಹಿಂದೆ ಪ್ರಸಾರವಾಗಿದ್ದ ‘ಬೆಳ್ಳಿ ಬೆರಗು ಮೈಸೂರಿನ ಕೊಡುಗೆ’ ಮತ್ತೆ ಏಪ್ರಿಲ್ 10ರಿಂದ ಮೇ 15ರ ವರೆಗೆ ಪ್ರಸಾರವಾಗಲಿದೆ.
ಏಪ್ರಿಲ್ 10ರಿಂದ ಮೇ 15ರ ವರೆಗೆ ಪ್ರತಿ ಸೋಮವಾರ ಬೆಳಿಗ್ಗೆ 9.30ಕ್ಕೆ ಪ್ರಸಾರವಾಗಲಿದೆ. ಕನ್ನಡ ಸಿನಿಮಾಕ್ಕೆ ಮೈಸೂರಿನ ಕೊಡುಗೆ ಕುರಿತು 20 ಕಂತುಗಳಲ್ಲಿ ಈ ಕಾರ್ಯಕ್ರಮ 2020ರಲ್ಲಿ ಪ್ರಸಾರವಾಗಿತ್ತು.
ಏಪ್ರಿಲ್ 10ರಂದು ಬೆಳಿಗ್ಗೆ 9.30ಕ್ಕೆ ನಟ, ನಿರ್ಮಾಪಕ ದ್ವಾರಕೀಶ್ ಕುರಿತು ಪ್ರಸಾರವಾಗಲಿದೆ. ಲೇಖಕ ಗಣೇಶ ಅಮೀನಗಡ ಅವರ ಲೇಖನವನ್ನು ತಮ್ಮ ವಿಶಿಷ್ಟವಾದ ಧ್ವನಿಯ ಮೂಲಕ ನಿರೂಪಿಸಿ, ಈ ಕಾರ್ಯಕ್ರಮ ಜನಪ್ರಿಯಗೊಳಿಸಿದವರು ಮೈಸೂರು ಆಕಾಶವಾಣಿಯ ಜಿ.ಎನ್.ಮಂಜುನಾಥ್. ಈ ಕಾರ್ಯಕ್ರಮವನ್ನು airmysorelive ಮೂಲಕ ನಿಮ್ಮ ಮೊಬೈಲ್ ಫೋನಿನಲ್ಲೂ ಕೇಳಬಹುದು.