ಬೆಂಗಳೂರಿಗರಿಗೆ ಭಾನುವಾರವೂ ತಪ್ಪದ ಸಂಕಷ್ಟ: ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಪವರ್‌ ಕಟ್‌ ಆಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ. ನಗರದ ಕೆಲ ಪ್ರದೇಶಗಳಲ್ಲಿ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ನಿರ್ವಹಣಾ ಕಾರ್ಯದಿಂದಾಗಿ ಇಂದು ವಿದ್ಯುತ್‌ ವ್ಯತ್ಯಯವಾಗಲಿದೆ ಎಂಬ ಮಾಹಿತಿ ನೀಡಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಅಭಾವ ಎದುರಾಗಲಿದೆ.

ಬೆಂಗಳೂರಿನ ಬೇತನಗೆರೆ, ತ್ಯಾಗದಹಳ್ಳಿ, ಹುಸ್ಕೂರು ರಸ್ತೆ, ಗೋಪಾಲಪುರ, ಮೈಲನಹಳ್ಳಿ, ಬೊಮ್ಮಶೆಟ್ಟಿಹಳ್ಳಿ, ಕಾನೇಗೌಡನಹಳ್ಳಿ, ಬೈರನಾಯಕನಹಳ್ಳಿ, ಬಸವನಹಳ್ಳಿ, ತ್ಲಭೇಶ್ವರನಹಳ್ಳಿ, ಠಾಣಾ ಗ್ರಾ.ಪಂ., ಅನಂತಪುರ, ದೇಗನಹಳ್ಳಿ ಬೊಲ್ಮಾರನಹಳ್ಳಿ, ಕುಕ್ಕನಹಳ್ಳಿ, ಗೊಲ್ಲಹಳ್ಳಿ, ಹುರಶೆಟ್ಟಿ ಹಳ್ಳಿ, ಟೆಲಿಕಾಂ ಲೇಔಟ್, ಅರ್ಜುನಬೆಟ್ಟಹಳ್ಳಿ, ಹ್ಯಾದಲ್, ಇಸ್ಲಾಂಪುರ, ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದು ಪವರ್‌ ಕಟ್‌ ಆಗಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಪ್ರತಿ ದಿನವೂ ಯಾವುದಾದರೊಂದು ಏರಿಯಾದಲ್ಲಿ ವಿದ್ಯತ್‌ ವ್ಯತ್ಯಯ ಸಮಸ್ಯೆ ಇದ್ದೇ ಇರುತ್ತದೆ. ನಿರಂತರ ಮಳೆಯಿಂದಾಗಿ ಹಲವು ನಿರ್ವಹಣ ಕಾರ್ಯಗಳು ಸ್ಥಗಿತವಾಗಿದ್ದು, ಇದೀಗ ಎಲ್ಲವನ್ನು ಹಂತ ಹಂತವಾಗು ದುರಸ್ತಿ ಮಾಡುವ ಕಾರ್ಯಕ್ಕೆ ಬೆಸ್ಕಾಂ, ಕೆಪಿಟಿಸಿಎಲ್‌ ಕೈ ಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!