ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದನವನದ ಹಿರಿಯ ನಿರ್ದೇಶಕ ಭಗವಾನ್ ಅವರು ಇಂದು ಬೆಳಗ್ಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಲೆಜೆಂಡ್ ನಿಧನಕ್ಕೆ ಚಂದವನವೇ ಕಣ್ಣೀರಿಡುತ್ತಿದೆ.
ಭಗವಾನ್ ಅವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಅದರಲ್ಲಿಯೂ ಬಾಂಡ್ ಶೈಲಿನ ಸಿನಿಮಾಗಳನ್ನು ಕನ್ನಡಕ್ಕೆ ಪರಿಚಯಿಸಿದ್ದೇ ಭಗವಾನ್ ಅವರು. ಬಾಲಿವುಡ್ ನಟಿ ರೇಖಾ ಅಭಿನಯದ ಜೇಡರ ಬಲೆ ಬಾಂಡ್ ಶೈಲಿಯ ಕನ್ನಡದ ಮೊದಲ ಸಿನಿಮಾವಾಗಿದೆ.
ಡಾ. ರಾಜ್ಕುಮಾರ್ ಅವರ ಜತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ಭಗವಾನ್ ಅವರು ನೀಡಿದ್ದು, ರಾಜ್ ಕುಟುಂಬಕ್ಕೆ ಭಗವಾನ್ ಅವರು ಆಪ್ತರು. ಪುನೀತ್ ರಾಜ್ಕುಮಾರ್ ನಿಧನರಾದಾಗಲೂ ಭಗವಾನ್ ಅವರೇ ಮುಂದೆ ನಿಂತು ವಿಧಿ ವಿಧಾನಗಳಲ್ಲಿ ತೊಡಗಿಸಿಕೊಂಡಿದ್ದರು. ಉಸಿರಾಟದ ತೊಂದರೆಯಿದ್ದ ಬಳಲುತ್ತಿದ್ದ ಭಗವಾನ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.