ಭಾರತ್‌ ಗೌರವ್‌ ‘ಕಾಶಿ’ ದರುಶನ: ಮೊದಲ ಯಾತ್ರೆಗೆ 600 ಜನರು ಬುಕ್ಕಿಂಗ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಅವರು ನಿನ್ನೆ ಚಾಲನೆಗೊಂಡು ಪ್ರಾರಂಭವಾಗಿರುವ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರಾರ್ಥಿಗಳನ್ನು ಕಾಶಿಯಲ್ಲಿ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಅ ಜೊಲ್ಲೆ ಸ್ವಾಗತಿಸಲಿದ್ದಾರೆ.

ವಾರಣಾಸಿಗೆ ಇಂದು ಆಗಮಿಸಿರುವ ಸಚಿವರು ನಾಳೆ ಮಧ್ಯಾಹ್ನ ಕಾಶಿಗೆ ಆಗಮಿಸಲಿರುವ ರೈಲು ಪ್ರವಾಸಿಗರಿಗೆ ರೈಲ್ವೇ ನಿಲ್ದಾಣದಲ್ಲಿ ಸ್ವಾಗತ ಕೋರಲಿದ್ದಾರೆ. ಇದೇ ವೇಳೆ ಪ್ರವಾಸಿಗರಿಗೆ ಕಾಯ್ದಿರಿಸಲಾಗುವ ವಸತಿ, ಊಟ ಮತ್ತು ಇನ್ನಿತರೆ ಸೌಲಭ್ಯಗಳನ್ನು ಪರಿಶೀಲಿಸಲಿದ್ದಾರೆ. ಕಾಶಿಯಲ್ಲಿರುವ ಹನುಮಾನ್‌ ಘಾಟ್ ನಲ್ಲಿರುವ ಕರ್ನಾಟಕ ರಾಜ್ಯ ಛತ್ರಕ್ಕೂ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ಕಾಶಿ ದರ್ಶನದ ಮೊದಲ ಯಾತ್ರೆಗೆ 600 ಜನರು ಬುಕ್ಕಿಂಗ್‌ ಮಾಡಿದ್ದರು. ಬುಕ್ಕಿಂಗ್‌ ಮಾಡಿದ್ದ ಎಲ್ಲಾ ಯಾತ್ರಾರ್ಥಿಗಳು ರೈಲನ್ನ ಹತ್ತಿದ್ದು, ಐಆರ್‌ಸಿಟಿಸಿ ಕಡೆಯಿಂದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೊಡೆಯನ್ನು ಉಚಿತವಾಗಿ ವಿತರಿಸಲಾಗಿದೆ.

ಈಗಾಗಲೇ ರೈಲು ಪ್ರಯಾಣದಲ್ಲಿರುವ ಕೆಲವು ಯಾತ್ರಾರ್ಥಿಗಳೊಂದಿಗೆ ಸಚಿವರು ಧೂರವಾಣಿ ಮುಖಾಂತರ ಮಾತನಾಡಿದಾಗಿ ಪ್ರಯಾಣಿಕರು, ಪ್ರಯಾಣದಲ್ಲಿ ಅತ್ಯುತ್ತಮ ಸೌಲಭ್ಯ ಒದಗಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!