ಬೈಕ್ ಕದ್ದು ಪರಾರಿ: ಅಂತರ್ ಜಿಲ್ಲಾ ಕಳ್ಳರ ಬಂಧನ

 ಹೊಸದಿಗಂತ ವರದಿ,ಮುಂಡಗೋಡ:

ಅಂಗಡಿಯ ಮುಂದೆ ನಿಲ್ಲಿಸಿಟ್ಟ ಬೈಕ್ ಕಳ್ಳತನ ಮಾಡಿಕೊಂಡು ಪರಾಯಾಗಿದ್ದ ಅಂತರ ಜಿಲ್ಲಾ ಕಳ್ಳರನ್ನು ಬುಧವಾರ ಪೋಲಿಸರು ಬಂಧಿಸಿದ್ದಾರೆ.
ಶಿಗ್ಗಾಂವಿ ತಾಲೂಕಿನ ತಡಸನ ರಮೇಶ ಮುಗಳಿಗಟ್ಟಿ(೨೬) ಮತ್ತು ಮಂಜುನಾಥ ಸೋಮನಕೊಪ್ಪ(೩೨) ಬಂಧಿತ ಆರೋಪಿಯಾಗಿದ್ದಾನೆ.
ಮೇ ೧೬ ರಂದು ಪಟ್ಟಣದ ಕಾಲಾಲು ಓಣಿಯ ಕೂಹಿನೂರ ಇಲೆಕ್ಟ್ರಿಕಲ್ ಅಂಗಡಿಯ ಮುಂದೆ ಪೀರಸಾಬ ಬಂಗ್ಲೇವಾಲೆ ಎಂಬುವರು ಸ್ಪೇಂಡರ್ ಬೈಕನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇಲಾಧಿಕಾರಿಗಳು ಸಿಪಿಐ ಎಸ್ ಎಸ್ ಸಿಮಾನಿ ಮತ್ತು ಪಿಎಸೈ ಯಲ್ಲಾಲಿಂಗ ಕುನ್ನೂರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ಪ್ರಕರಣ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್ ವಿಷ್ಣುವರ್ಧನ. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ.ಜಯಕುಮಾರ ಮತ್ತು ಶಿರಸಿ ಡಿವೈಎಸ್ಪಿ ಗಣೇಶ ಕೆ.ಎನ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಎಸ್.ಎಸ್. ಸಿಮಾನಿ, ಪಿಎಸೈ ಯಲ್ಲಾಲಿಂಗ ಕುನ್ನೂರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹ್ಮದಸಲೀಮ್ ಬಿ.ಕೆ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಮಾಣಿ, ಶಂಭುಲಿಂಗ ಜಾವುರು ಬಮ್ಮಗಟ್ಟಿ, ಪ್ರಕಾಶ ಶೃಂಗೇರಿ, ಅಣ್ಣಪ್ಪ ಶಿಗ್ಗಾಂವಿ ಸೇರಿದಂತೆ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!