ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಹೌರಾದಲ್ಲಿ (Howrah) ನಡೆದ ಘರ್ಷಣೆ ಬಿಜೆಪಿ (BJP) ಪ್ರಾಯೋಜಿತ ಮತ್ತು ಬಿಜೆಪಿಯಿಂದ ಮೊದಲೇ ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಆರೋಪ ಹೊರಿಸಿದ್ದಾರೆ.
ಯಾರೂ ರಾಮ ನವಮಿಯಂದು ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಲಿಲ್ಲ ಆದರೆ ಕತ್ತಿ ಮತ್ತು ಬುಲ್ಡೋಜರ್ಗಳೊಂದಿಗೆ ಮೆರವಣಿಗೆ ಮಾಡುವ ಹಕ್ಕು ಅವರಿಗಿಲ್ಲ ಎಂದಿದ್ದಾರೆ. ಇದು ಬಿಜೆಪಿ ಕೋಮು ಗಲಭೆಗಳನ್ನುಂಟು ಮಾಡಲು ಗೂಂಡಾಗಳನ್ನು ನೇಮಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಂಜಾನ್ ಸಮಯದಲ್ಲಿ ಉಪವಾಸ ಮಾಡುವ ಮುಸ್ಲಿಂ ಸಮುದಾಯವು ಯಾವುದೇ ಹಿಂಸಾಚಾರವನ್ನು ಪ್ರಾರಂಭಿಸಲು ಸಾಧ್ಯವಿಲ್ಲ . ಅದೇ ರೀತಿ ಇದರಲ್ಲಿ ಭಾಗಿಯಾದವರು ಸ್ಥಳೀಯರಲ್ಲ ಆದರೆ ಹೊರಗಿನಿಂದ ಬಂದವರು ಎಂದು ಹೇಳಿದರು.
ಒಂದು ಸಮುದಾಯವನ್ನು ಗುರಿಯಾಗಿಸಲು ಮತ್ತು ಆಕ್ರಮಣ ಮಾಡಲುಮಾರ್ಗವನ್ನು ಬದಲಾಯಿಸಿದ್ದೇಕೆ? ಅವರೇಕೆ ಅನಧಿಕೃತ ಮಾರ್ಗವನ್ನು ತೆಗೆದುಕೊಂಡರು? ಎಂದು ಪ್ರಶ್ನಿಸಿದ್ದಾರೆ.
ಗುರುವಾರ, ಹೌರಾದ ಕಾಜಿಪಾರಾದಲ್ಲಿ ರಾಮನವಮಿ ಹಬ್ಬದ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆಗಳು ನಡೆದಿದ್ದರಿಂದ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಅಂಗಡಿಗಳನ್ನು ಧ್ವಂಸವಾಗಿತ್ತು.
ಈ ಘಟನೆಯು ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವೆ ರಾಜಕೀಯ ಗದ್ದಲಕ್ಕೆ ಕಾರಣವಾಗಿದ್ದು, ಅವರು ಪರಸ್ಪರ ಆರೋಪಗಳನ್ನು ಮುಂದುವರೆಸಿದ್ದಾರೆ.