ಹೊಸದಿಗಂತ ವರದಿ, ವಿಜಯಪುರ:
ನಾಗಠಾಣ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳಿ ಆಟೋದಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿರುವುದು ಜನರ ಗಮನ ಸೆಳೆಯುವಂತಾಗಿದೆ.
ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಗುರುವಾರ ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಮಪತ್ರ ಸಲ್ಲಿಕೆಗಾಗಿ ಚುನಾವಣಾ ಅಧಿಕಾರಿ ಕಚೇರಿಗೆ ಆಟೋದಲ್ಲಿ ತೆರಳಿದರು.
ಅತಿ ಸಾಮಾನ್ಯ ಕಾರ್ಯಕರ್ತನಾದ ನಾಗಠಾಣ ಬಿಜೆಪಿ ಅಭ್ಯರ್ಥಿ ಸಂಜೀವ್ ಹೆಸರಿನಲ್ಲಿ ಸ್ವಂತ ಕಾರು, ಬೈಕ್ ಕೂಡ ಇಲ್ಲ.
ಚುನಾವಣಾ ಅಧಿಕಾರಿ ಕಚೇರಿಗೆ ತೆರಳಲು ಆಟೋಕ್ಕಾಗಿ ತುಂಬಾ ಹೊತ್ತು ಕಾಯ್ದು ನಿಂತು, ಬಳಿಕ ಆಟೋ ಹತ್ತಿ ಇಲ್ಲಿನ ಜಿಪಂ ಕಚೇರಿ ಆವರಣ ಬಳಿಯ ನಾಮಪತ್ರ ಸಲ್ಲಿಕೆ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಸೀದಾ, ಸಾದಾ ಡ್ರೆಸ್’ನ ಬಿಜೆಪಿ ಅಭ್ಯರ್ಥಿ ಸಂಜೀವ್ ಐಹೊಳಿ ಕಂಡು ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ.