ಹೊಸದಿಗಂತ ವರದಿ, ಹುಬ್ಬಳ್ಳಿ:
ಬಿಜೆಪಿಯವರು ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಿ ಜನರನ್ನು ಮತ ಕೇಳುವುದಿಲ್ಲ. ಹಿಂದು ಮಸ್ಲಿಂ ಎಂದು ಹೇಳಿಕೊಂಡು ಮತ ಪಡೆಯುತ್ತಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಆರೋಪಿಸಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬ್ರೋಕರ್ ಪಕ್ಷಕ್ಕಿಂತ ಹೆಚ್ಚಾಗಿದೆ. ಆಡಳಿತದಲ್ಲಿ ಬರೇ ಭ್ರಷ್ಟಾಚಾರ ತುಂಬಿದೆ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಅವರು ಲವ್ ಜಿಹಾದ್ ಬಗ್ಗೆ ಮಾತನಾಡಿ ರಸ್ತೆ, ಚರಂಡ್ಡಿ , ಕುಡಿಯುವ ನೀರಿನ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ಅವರಿಗೆ ಅಭಿವೃದ್ಧಿ ಬೇಡಾಗಿದೆ. ಹಿಂದೂ ಮುಸ್ಲಿಂ ಎಂಬ ಜಾತಿ ಮಾಡಿ ಅಕಾರಕ್ಕೆ ಬಂದು ದುಡ್ಡು ಮಾಡುವುದು ಅಷ್ಟೇ ಬಿಜೆಪಿಗೆ ಬೇಕಾಗಿದೆ ಎಂದರು.
ವರುಣಾದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲಿ: ವರುಣಾ ಹಾಗೂ ಚಾಮರಾಜನಗರದಲ್ಲಿ ರ್ಸ್ಪಸಲು ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ. ಕೋಲಾರ ಹಾಗೂ ಬೇರೆಯಲ್ಲಿ ಸಹ ಸ್ಪರ್ಧಿ ಸುವುದು ಬೇಡಾ ಎಂದಿದ್ದೇನೆ ಎಂದರು.
ಸಿದ್ದರಾಮಯ್ಯ ಅವರಿಗಾಗಿ ಚಾಮರಾಜನಗರ ಬಿಟ್ಟುಕೊಡುತ್ತಿಲ್ಲ. ರಾಜ್ಯದ ಜನರ ಹಿತಕ್ಕಾಗಿ ಬಿಟ್ಟು ಕೊಡುತ್ತಿದೇನೆ. ಅವರು ಚುನಾವಣಾ ಸಂದರ್ಭದಲ್ಲಿ ರಾಜ್ಯ ಪ್ರವಾಸ ಮಾಡುವುದು ಅವಶ್ಯಕತೆ ಇದೆ. ಆದರಿಂದ ಚಾಮರಾಜನಗರಕ್ಕೆ ಬಂದು ಅರ್ಜಿ ಸಲ್ಲಿಸಿದರೆ ಸಾಕು ಎಂದು ಹೇಳಿದರು.
ಓರ್ವ ಎಂಜಿನಿಯರ್ ವಿಧಾನ ಸೌಧಕ್ಕೆ ೧೦ ಲಕ್ಷ ರೂ. ತೆಗೆದುಕೊಂಡು ಹೋಗುತ್ತಾನೆ ಎಂದರೇ ಅದು ಒಂದು ಸಚಿವರಿಗೆ ಲಂಚ ನೀಡಲು ಅಥವಾ ತನ್ನ ವರ್ಗಾವಣೆ ಮಾಡಿಸಿಕೊಳ್ಳಲು ಎಂದು ಸ್ಪಷ್ಟವಾಗುತ್ತದೆ. ಸಾಮಾನ್ಯ ವ್ಯಕ್ತಿ ಹಣ ತೆಗೆದುಕೊಂಡು ಹೋಗಿದ್ದರೆ ಈ ಪ್ರಶ್ನೆ ಮೂಡುತ್ತಿರಲಿಲ್ಲ.