ಹೊಸದಿಗಂತ ವರದಿ ಕಲಬುರಗಿ:
ರಾಜ್ಯ ವಿಧಾನಸಭಾ ಚುನಾವಣೆಯ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಿಲ್ಲೆಯ 9 ಮತ ಕ್ಷೇತ್ರಗಳಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಜಿಲ್ಲೆಯ ಅಫಜಲಪೂರ್ ಮತಕ್ಷೇತ್ರಕ್ಕೆ ಮಾಲೀಕಯ್ಯಾ ಗುತ್ತೇದಾರ, ಜೇವರ್ಗಿ ಮತಕ್ಷೇತ್ರಕ್ಕೆ ಶಿವರಾಜ್ ಪಾಟೀಲ್ ರದ್ದೇವಾಡಗಿ, ಚಿತ್ತಾಪುರ(ಮೀಸಲು) ಕ್ಷೇತ್ರಕ್ಕೆ ಮಣಿಕಂಠ ರಾಠೋಡ್, ಚಿಂಚೋಳಿ (ಮೀಸಲು) ಕ್ಷೇತ್ರಕ್ಕೆ ಡಾ. ಅವಿನಾಶ್ ಜಾಧವ, ಕಲಬುರಗಿ ಗ್ರಾಮೀಣ ( ಮೀಸಲು) ಕ್ಷೇತ್ರಕ್ಕೆ ಬಸವರಾಜ್ ಮತ್ತಿಮೂಡ್, ಕಲಬುರಗಿ ದಕ್ಷಿಣ ಮತಕ್ಷೇತ್ರಕ್ಕೆ ದತ್ತಾತ್ರೇಯ ಪಾಟೀಲ್ ರೇವೂರ್, ಕಲಬುರಗಿ ಉತ್ತರ ಕ್ಷೇತ್ರಕ್ಕೆ ಚಂದ್ರಕಾಂತ್ (ಚಂದು) ಪಾಟೀಲ್ ಹಾಗೂ ಆಳಂದ ಕ್ಷೇತ್ರಕ್ಕೆ ಸುಭಾಷ್ ಗುತ್ತೇದಾರ ಹೆಸರು ಘೋಷಣೆ ಮಾಡಿದೆ.
ಜಿಲ್ಲೆಯ ಐವರು ಹಾಲಿ ಶಾಸಕರಲ್ಲಿ ನಾಲ್ವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಸೇಡಂ ಕ್ಷೇತ್ರಕ್ಕೆ ಬಿಜೆಪಿ ಹಾಲಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.