ಹೊಸದಿಗಂತ ವರದಿ, ಬಳ್ಳಾರಿ:
ನಗರದ ಸಂಗನಕಲ್ ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಬಿಜೆಪಿ ಜಿಲ್ಲಾ ನೂತನ ಕಾರ್ಯಾಲಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಜಿ ಅವರು ವರ್ಚುವಲ್ ಮೂಲಕ ಗುರುವಾರ ಉದ್ಘಾಟಿಸಿದರು.
ಬೆಳಿಗ್ಗೆ ಗೋ ಪೂಜೆ, ಸುದರ್ಶನ ಹೋಮ, ನವಗ್ರಹ ಶಾಂತಿ ಹೋಮ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಕೊಪ್ಪಳದಲ್ಲಿ ಏಕಕಾಲಕ್ಕೆ ನಡೆದ ರಾಜ್ಯದ 10 ಬಿಜೆಪಿ ಜಿಲ್ಲಾ ನೂತನ ಕಾರ್ಯಾಲಯದಲ್ಲಿ ಗಣಿನಾಡು ಬಳ್ಳಾರಿ ಕಾರ್ಯಾಲಯವೂ ಒಂದಾಗಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಜಿ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದರು.
ಇದಕ್ಕೂ ಮುನ್ನ ನಡೆದ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಎಮ್ಮೆಲ್ಸಿ ವೈ.ಎಂ.ಸತೀಶ್, ಸಿರಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಂದೀಶ್ ಜೀ, ಬೂಡಾ ಅಧ್ಯಕ್ಷ ಮಾರುತಿ ಪ್ರಸಾದ್ ಸರ್ವಶೆಟ್ಟಿ, ಮಾಜಿ ಸಂಸದರಾದ ಸಣ್ಣ ಫಕೀರಪ್ಪ, ಜೆ.ಶಾಂತಾ, ಮಾಜಿ ಎಮ್ಮೆಲ್ಸಿ ಮೃತ್ಯುಂಜಯ ಜಿನಗಾ, ಎಸ್.ಗುರುಲಿಂಗನಗೌಡ, ಇಬ್ರಾಹಿಂ ಬಾಬು, ಓಬಳೇಶ್ ಸಂಡೂರು, ಭಾಗ್ಯಲಕ್ಷ್ಮೀ, ಡಾ.ಎಂ.ಟಿ.ಮಲ್ಲೇಶಪ್ಪ, ಬಿ.ಶಿವಕುಮಾರ್, ವಿರುಪಾಕ್ಷಗೌಡ, ಸಚ್ಚಿದಾನಂದ ಮೂರ್ತಿ, ಎರ್ರಂಗಳಿ ತಿಮ್ಮಾರೆಡ್ಡಿ, ಕೆ.ರಾಮಲಿಂಗಪ್ಪ, ವೀರಶೇಖರ ರೆಡ್ಡಿ, ಡಾ.ಮಹಿಪಾಲ್, ವಿಜಯಲಕ್ಷ್ಮಿ, ಅನೀಲ್ನಾಯ್ಡು, ರಾಜೀವ್ ತೊಗರಿ, ಎರ್ರಿಸ್ವಾಮೀ, ಜಿ.ಟಿ.ಪಂಪಾಪತಿ ಸೇರಿದಂತೆ ಇತರರಿದ್ದರು.