ಉದಯಪುರ ಹಿಂದು ಹತ್ಯೆ: ಕನ್ಹಯ್ಯ ಕುಟುಂಬಕ್ಕೆ ಬಿಜೆಪಿಯ ಕಪಿಲ್ ಮಿಶ್ರ ಆರ್ಥಿಕ ನೆರವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ತಾನದ ಉದಯಪುರದಲ್ಲಿ ನಿನ್ನೆ ಹಿಂದು ವ್ಯಕ್ತಿಯ ಹತ್ಯೆ ನಡೆದಿದೆ. ಹತ್ಯೆಯನ್ನು ಖಂಡಿಸಿದ ಬಿಜೆಪಿಯ ಕಪಿಲ್‌ ಮಿಶ್ರಾ ಕನ್ಹಯ್ಯಾ ಕುಟುಂಬದ ಬೆಂಬಲಕ್ಕೆ ನಿಂತಿದ್ದು, ಆರ್ಥಿಕ ನೆರವು ಘೋಷಣೆ ಮಾಡಿದ್ದಾರೆ. ʻಕನ್ಹಯ್ಯಾ ಲಾಲ್ ಅವರನ್ನು ಜಿಹಾದಿಗಳು ಕೊಲೆ ಮಾಡಿದ್ದಾರೆ. ಅವರ ಕುಟುಂಬ ಅತ್ಯಂತ ದುಃಖದಲ್ಲಿದೆ. ಇಂತಹ ಸಮಯದಲ್ಲಿ ಕನ್ಹಯ್ಯಾ ಕುಟುಂಬದ ಜೊತೆ ನಾವಿದ್ದೇವೆ. ನಾವು ಅವರ ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಯನ್ನು ಹೊರುತ್ತೇವೆ. ಕನ್ಹಯ್ಯಾ ಲಾಲ್ ಕುಟುಂಬಕ್ಕೆ ನಾವು ಒಂದು ಕೋಟಿ ರೂಪಾಯಿ ನೀಡುತ್ತೇವೆ. ಇಂದು ಅವರ ಕುಟುಂಬವನ್ನು ಭೇಟಿ ಮಾಡಿ 50ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದರು.

ಇಷ್ಟೇ ಅಲ್ಲ, ಕನ್ಹಯ್ಯಾ ಇಲ್ಲದಿದ್ದರೂ ಅವರ ಕುಟುಂಬದೊಂದಿಗೆ ದೇಶ ಮತ್ತು ಪ್ರಪಂಚದಾದ್ಯಂತದ ಇರುವ ಹಿಂದೂ ಸಮಾಜವಿದೆ. ಅವರ ಪತ್ನಿ, ಮಕ್ಕಳು, ಕುಟುಂಬ ಒಂಟಿಯಾಗಿರಲು ನಾವು ಬಿಡುವುದಿಲ್ಲ. ಹಿಂದೂ ಏಕತೆ ನಮ್ಮ ಸಂಕಲ್ಪ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!