ಬಿಜೆಪಿ ವಿಜಯ ಸಂಕಲ್ಪ ಯಾತ್ರೆ : ಬೀದರ್‌ನಲ್ಲಿ ನಾಳೆ ಕೇಂದ್ರ ಗೃಹ ಸಚಿವ ಅಮೀತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಬಸವೇಶ್ವರರ ಕರ್ಮ ಭೂಮಿ ಬಸವಕಲ್ಯಾಣಕ್ಕೆ ನಾಳೆ(ಮಾ.03) ಕೇಂದ್ರ ಗೃಹ ಸಚಿವ ಅಮೀತ್ ಶಾ ಆಮಿಸಲಿದ್ದು, ಬಿಜೆಪಿಯ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ನಾಳೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್ ‌ಏರ್ ಬೇಸ್ ಗೆ ಮುಂಜಾನೆ 11:40ಕ್ಕೆ ಬರಲಿದ್ದು, ಬಸವಕಲ್ಯಾಣದ ಹೆಲಿಪ್ಯಾಡ್​ನಿಂದ ರಸ್ತೆಯ ಮೂಲಕ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ಮಾಡಲಿದ್ದಾರೆ.

ನಂತರ ಅನುಭವ ಮಂಟಪದಿಂದ ಬಸವಕಲ್ಯಾಣ ತೇರು ಮೈದಾನದ ವರೆಗೆ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಇತರೆ ನಾಐಕರು ಅಮಿತ್ ಶಾ ಗೆ ಸಾಥ್ ನೀಡಲಿದ್ದಾರೆ.

ಇನ್ನು ಅಮಿತ್ ಶಾ ಅವರನ್ನು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧಮಾಡಿಕೊಳ್ಳಲಾಗಿದ್ದು, ಅವರಿಗಾಗಿಯೇ ಬೆಳ್ಳಿ ಕಿರಿಟ ಹಾಗೂ ಬೆಳ್ಳಿ ಗದೆ ತಯಾರಾಗಿದೆ. ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಶಾಗೆ ಬೆಳ್ಳಿ ಗದೆ ಮತ್ತು ಬೆಳ್ಳಿ ಕಿರಿಟ್ ತೊಡಿಸಿ ಸನ್ಮಾನಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!