ಉಡುಪಿಯ ಬಿಜೆಪಿ ಕಾರ್ಯಕರ್ತರಿಗಿದೆ ನಂ.1 ಶಾಸಕನನ್ನು ಸೋಲಿಸಿದ ಹೆಗ್ಗಳಿಕೆ: ಪ್ರಮೋದ್ ಮಧ್ವರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

2018 ರಲ್ಲಿ ಖಾಸಗಿ ಪತ್ರಿಕೆಯವರು ನಡೆಸಿದ ಸಮೀಕ್ಷೆಯಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ರಾಜ್ಯದಲ್ಲೇ ನಂ.1 ಸ್ಥಾನವನ್ನು ಪಡೆದ ನನ್ನನ್ನು ಸೋಲಿಸಲು ಕಾರಣ ಉಡುಪಿಯ ಬಿಜೆಪಿ ಕಾರ್ಯಕರ್ತರು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು  ಉಡುಪಿಯಲ್ಲಿ ನಡೆದ ಬೂತ್ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು
ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಂದಾಗಿ ನಾನು ಸೋತರು, ನನಗೆ ಕಿಂಚಿತ್ತೂ ಬೇಸರವಿಲ್ಲ. ಮೋದಿಯವರಿಗೋಸ್ಕರ ಕಾರ್ಯಕರ್ತರು ನನ್ನನ್ನು ಸೋಲಿಸಿದ್ದಾರೆ. ಈಗ ನಾನು ಬಿಜೆಪಿಯಲ್ಲಿದ್ದೇನೆ. ನಾವೆಲ್ಲರೂ ಒಟ್ಟಿಗೆ ಭಾಜಪಕ್ಕಾಗಿ ಕೆಲಸ ಮಾಡೋಣ ಎಂದರು.
ಕೋವಿಡ್ ಮಹಾಮಾರಿಯನ್ನು ನಿಭಾಯಿಸಿ, ನಾವೆಲ್ಲರೂ ಮುಂದುವರಿಯುತ್ತಿದ್ದೇವೆ ಎಂದರೇ ಮೋದಿಯವರು ಕಾರಣ. ಮುಂದಿನ ಚುನಾವಣೆಗೆ ವೇದಿಕೆ ಸಿದ್ದವಾಗಿದ್ದು, ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಉಡುಪಿಯಿಂದ ಪಾಂಚಜನ್ಯ ಮೊಳಗಿಸೋಣ ಎಂದು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!