ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಗೋ ಏರ್ಲೈನ್ಸ್ ವಿಶೇಷ ಚೇತನ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ ಹಿನ್ನಲೆ ಡಿಜಿಸಿಎ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಏರ್ಪೋರ್ಟ್ನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದು, ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಎಚ್ಚೆತ್ತಿರುವ ನಾಗರಿಕ ವಿಮಾನಯಾನ ಸಚಿವಾಲಯ ವಿವರ ಕೋರಿ ಇಂಡಿಗೋ ಸಂಸ್ಥೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಜಾರ್ಖಂಡ್ ರಾಜಧಾನಿ ರಾಂಚಿಯ ಏರ್ಪೋರ್ಟ್ನಲ್ಲಿ ಶನಿವಾರ (ಏ.7) ಈ ಘಟನೆ ನಡೆದಿತ್ತು.
ಈ ಕುರಿತು ಮಾಹಿತಿ ನೀಡಿದ ವಿಮಾನಯಾನ ನಿಯಂತ್ರಕ ಡಿಜಿಸಿಎ, ವಿಕಲ ಚೇತನ ಮಗುವಿಗೆ ಬೋರ್ಡಿಂಗ್ ನಿರಾಕರಿಸುವ ಮೂಲಕ ಇಂಡಿಗೋ ಏರ್ಲೈನ್ ಸಿಬ್ಬಂದಿ ಪ್ರಾಥಮಿಕವಾಗಿ ನಿಯಮಾವಳಿಗಳನ್ನು ಉಲ್ಲಂಘಿಸಿರುವುದನ್ನು ಸತ್ಯಶೋಧನಾ ಸಮಿತಿಯು ಕಂಡುಕೊಂಡಿದ್ದು, ಇದೇ ಕಾರಣಕ್ಕಾಗಿ ಇಂಡಿಗೋಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ತಿಳಿಸಿದೆ.
ಏನಿದು ಘಟನೆ?
ರಾಂಚಿಯಿಂದ ಹೈದರಾಬಾದ್ಗೆ ಹೋಗುವ ವಿಮಾನದಲ್ಲಿ ವಿಶೇಷ ಸಾಮರ್ಥ್ಯ ಹೊಂದಿರುವ ಮಗುವಿಗೆ ಹತ್ತಲು ನಿರಾಕರಿಸಿದ್ದಾರೆ. ಈ ಕುರಿತು ಸಹ ಪ್ರಯಾಣಿಕರಾದ ಮನಿಶಾ ಗುಪ್ತಾ ಫೇಸ್ಬುಕ್ನಲ್ಲಿ ಮಾಹಿತಿ ಹಾಕಿದ್ದು, ಘಟನೆ ವೈರಲ್ ಆಗಿದೆ. ಮಗುವು ಆರಂಭದಲ್ಲಿ ಗಲಾಟೆ ಮಾಡುತ್ತಿತ್ತು ಎಂದು ಅವರು ಬರೆದಿದ್ದಾರೆ ಮತ್ತು ಪೋಷಕರು ಅವನನ್ನು ಹೇಗೆ ಶಾಂತಗೊಳಿಸಬೇಕೆಂದು ತಿಳಿದಿದ್ದರು ಮತ್ತು ಆತನನ್ನು ಶಾಂತಗೊಳಿಸಿದರು. ಇದರ ಹೊರತಾಗಿಯೂ ವಿಮಾನಯಾನ ಸಿಬ್ಬಂದಿ ಅವರನ್ನು ವಿಮಾನ ಏರಲು ಬಿಡಲು ನಿರಾಕರಿಸಿದರು.
ಇಂಡಿಗೋ ಸಿಬ್ಬಂದಿ ಮಗುವಿಗೆ ವಿಮಾನ ಏರಲು ಅನುಮತಿ ನೀಡುವುದಿಲ್ಲ ಎಂದು ಘೋಷಿಸಿದರು. ಏಕೆಂದರೆ ಈ ಮಗುವಿನಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಅವರು ಹೇಳಿದರು. ಆದರೆ ಇತರ ಸಹ ಪ್ರಯಾಣಿಕರು ಮಗು ಮತ್ತು ಪೋಷಕರ ಬೆಂಬಲಕ್ಕೆ ಬಂದರು ಮತ್ತು ಮಗು ಮತ್ತು ಅವನ ಹೆತ್ತವರು ವಿಮಾನವನ್ನು ಹತ್ತಲು ನಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಸಿಬ್ಬಂದಿಗೆ ಭರವಸೆ ನೀಡಿದರು. ಪ್ರಯಾಣಿಕರಲ್ಲಿ ವೈದ್ಯರ ನಿಯೋಗವು ಮಗುವಿಗೆ ಪ್ರಯಾಣಿಸಲು ಅವಕಾಶ ನೀಡುವಂತೆ ಅಧಿಕಾರಿಗೆ ಮನವಿ ಮಾಡಿದೆ. ಆದರೆ, ಎಲ್ಲರ ವಿನಂತಿಗಳು ಮತ್ತು ಮನವಿಗಳ ನಂತರವೂ ಇಂಡಿಗೋ ವಿಮಾನವು ಮಗು ಮತ್ತು ಅವನ ಪೋಷಕರು ಸೇರಿದಂತೆ ಮೂವರು ಪ್ರಯಾಣಿಕರನ್ನು ಬಿಟ್ಟು ರಾಂಚಿಯಿಂದ ಹೈದರಾಬಾದ್ಗೆ ಹಾರಿತು.
ಈ ಕುರಿತು ತನಿಖೆ ನಡೆಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಸತ್ಯಶೋಧನಾ ಸಮಿತಿಯನ್ನು ರಚಿಸಿತ್ತು. ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ ಎಂದು ಡಿಜಿಸಿಎ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಸಮಿತಿಯ ಪ್ರಾಥಮಿಕ ತನಿಖೆಗಳು ಇಂಡಿಗೋ ಸಿಬ್ಬಂದಿಯಿಂದ ಪ್ರಯಾಣಿಕರನ್ನು ಅಸಮರ್ಪಕವಾಗಿ ನಿರ್ವಹಿಸುವುದನ್ನು ಕಂಡುಕೊಂಡಿದೆ. ಇದರಿಂದಾಗಿ ಅನ್ವಯವಾಗುವ ನಿಯಮಗಳೊಂದಿಗೆ ಕೆಲವು ಅಸಂಗತತೆಗಳು ಉಂಟಾಗುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು, ನಿಯಮ ಉಲ್ಲಂಘನೆಗಾಗಿ ಅವರ ವಿರುದ್ಧ ಸೂಕ್ತ ಜಾರಿ ಕ್ರಮವನ್ನು ಏಕೆ ತೆಗೆದುಕೊಳ್ಳಬಾರದು ಎಂದು ವಿವರಿಸಲು ಅದರ ಅಧಿಕೃತ ಪ್ರತಿನಿಧಿಯ ಮೂಲಕ ಏರ್ಲೈನ್ಗೆ ಶೋಕಾಸ್ ನೋಟಿಸ್ ನೀಡಲು ನಿರ್ಧರಿಸಲಾಗಿದೆ.
ಇಂಡಿಗೋ ಸ್ಪಷ್ಟನೆ
ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಇತರ ಪ್ರಯಾಣಿಕರು ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಸಾಮರ್ಥ್ಯವುಳ್ಳ ಮಗುವನ್ನು ತನ್ನ ಕುಟುಂಬದೊಂದಿಗೆ ಮೇ 7 ರಂದು ವಿಮಾನದಲ್ಲಿ ಸಾಗಲು ಬಿಡಲಿಲ್ಲ. ವಿಮಾನ ಸಿಬ್ಬಂದಿ ಕೊನೆಯ ಕ್ಷಣದವರೆಗೂ ಆ ಮಗು ಶಾಂತವಾಗಲು ಕಾಯುತ್ತಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಾದ ಬಳಿಕ ವಿಮಾನಯಾನ ಸಂಸ್ಥೆಯು ಆ ಕುಟುಂಬಕ್ಕೆ ಹೋಟೆಲ್ ವಾಸ್ತವ್ಯವನ್ನು ಒದಗಿಸಿದೆ. ಈ ಕುಟುಂಬವು ಇಂದು ಬೆಳಗ್ಗೆ ತಾವು ಹೋಗಬೇಕಾದಲ್ಲಿಗೆ ತೆರಳಿದ್ದಾರೆ. ಇಂಡಿಗೋ ತನ್ನ ಉದ್ಯೋಗಿಗಳಿಗಾಗಲಿ ಅಥವಾ ಗ್ರಾಹಕರಿಗಾಗಲಿ ಎಲ್ಲರನ್ನು ಒಳಗೊಳ್ಳುವ ಸಂಸ್ಥೆ ಎಂದು ಹೆಮ್ಮೆಪಡುತ್ತದೆ. ಮತ್ತು ಪ್ರತಿ ತಿಂಗಳು 75 ಸಾವಿರಕ್ಕೂ ವಿಶೇಷ ಸಾಮರ್ಥ್ಯವುಳ್ಳ ಪ್ರಯಾಣಿಕರು ಇಂಡಿಗೋ ಮೂಲಕ ಹಾರಾಟ ನಡೆಸುತ್ತಾರೆ ಎಂದು ಇಂಡಿಗೋ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಸಚಿವರಿಂದ ಮಾಹಿತಿ
ಘಟನೆಗೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಸ್ವತಃ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಅಂತಹ ನಡವಳಿಕೆಯ ಬಗ್ಗೆ ಯಾವುದೇ ಸಹನೆ ಇಲ್ಲ. ಯಾವ ಮನುಷ್ಯನೂ ಈ ರೀತಿ ಆಡಬಾರದು. ಈ ಬಗ್ಗೆ ನಾನೇ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.