ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಶ್ರದ್ಧಾ ಕೊಲೆ ಪ್ರಕರಣದಲ್ಲಿ ಶ್ರದ್ಧಾ ಮೂಳೆಗಳ ಪೋಸ್ಟ್ ಮಾರ್ಟಮ್ ರಿಪೋರ್ಟ್ ದೊರಕಿದೆ. ಈ ಪರೀಕ್ಷೆಯಲ್ಲಿ ಶ್ರದ್ಧಾ ದೇಹವನ್ನು ಅಫ್ತಾಬ್ ಗರಗಸದಿಂದ ಕತ್ತರಿಸಿದ್ದ ಎನ್ನುವುದು ಸಾಬೀತಾಗಿದೆ.
ಅಫ್ತಾಬ್ ಪೂನಾವಾಲಾ ಪೊಲೀಸರನ್ನು ಮೆಹ್ರೌಲಿಯ ಅರಣ್ಯ ಪ್ರದೇಶದಲ್ಲಿ, ಗುರುಗ್ರಾಮದಲ್ಲಿ ಕರೆದೊಯ್ದು ಶ್ರದ್ಧಾಳ ಶವದ ತುಂಡುಗಳನ್ನು ಬಿಸಾಡಿದ್ದ ಜಾಗವನ್ನು ತೋರಿಸಿದ್ದ. ಅಲ್ಲಿ ಸಿಕ್ಕ ಮೂಳೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.