ಹೊಸದಿಗಂತ ವರದಿ, ಮುಂಡಗೋಡ:
ಬೋರ್ ವೆಲ್ ಕೊರೆಯುವ ಲಾರಿಯೊಂದು ಅಕಸ್ಮಿಕವಾಗಿ ರಸ್ತೆ ಬದಿಗೆ ಮುಗುಚಿ ಬಿದ್ದ ಘಟನೆ ತಾಲೂಕಿನ ಕೊಪ್ಪ ಇಂದಿರಾನಗರ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಕೊಪ್ಪ ಇಂದಿರಾನಗರ ಹತ್ತಿರ ಹೊಲವೊಂದರಲ್ಲಿ ಬೋರ್ ವೆಲ್ ಕೊರೆಯಲು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗದ್ದೆಗೆ ತೆರಳಬೇಕಾದ ರಸ್ತೆ ಕಿರಿದಾಗಿ ಇರುವುದರಿಂದ ಬೋರ್ ವೆಲ್ ವಾಹನ ಉರುಳಿ ಭತ್ತದ ಗದ್ದೆಯಲ್ಲಿ ಬಿದ್ದಿದೆ. ಬಾಹನದಲ್ಲಿ ಚಾಲಕ ಹಾಗೂ ಕಿನ್ನರ ಇಬ್ಬರು ಇದ್ದರು ಲಾರಿ ಉರುಳಿದರು ಯಾವುದೆ ಪ್ರಾಣಹಾನಿಯಾಗಿಲ್ಲ. ಬೋರ್ ವೆಲ್ ಕೊರೆಯುವ ವಾಹನದ ಹಿಂದುಗಡೆ ಪೈಪುಗಳನ್ನು ಒದಗಿಸುವ ಲಾರಿ ಹೊರಟಿದ್ದು ಅದು ಸುರಕ್ಷಿತವಾಗಿದೆ.