ಬಾರ್ ನಲ್ಲಿ ಮದ್ಯದ ಬಾಟಲಿಗಳ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಹೊಸ ದಿಗಂತ ವರದಿ , ಬಾಗಲಕೋಟೆ:

ನಗರದ ಬಾರ್ ವೊಂದನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಶನಿವಾರ ಬೆಳಗಿನವ ಜಾವ ಬಂಧಿಸುವಲ್ಲಿ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾತ್ರಿ ಸ್ಥಳೀಯ ಜಯಶ್ರೀ ಬಾರ್ನ ಕೀಲಿ ಮುರಿದು ಬೀಯರ್, ಬಿಪಿ ಸೇರಿದಂತೆ ಇನ್ನಿತರ ಮಧ್ಯದ ಬಾಟಲಗಳನ್ನು ಕಳ್ಳತನ ಮಾಡಲಾಗಿತ್ತು. 15 ಸಾವಿರ ಮೌಲ್ಯದ ಮಧ್ಯದ ಬಾಟಲಿಗಳ ಸಮೇತ ನಗರದ ಸೆಟಲ್ಮೆಂಟ್ ಕಾಲೋನಿಯ ಮಲ್ಲು ಸಿದ್ದು ಚವ್ಹಾಣ (25), ವಿಜಯ  ಹರೀಶ ಕಾಳೆ (28) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಜಯಶ್ರೀ ಬಾರ್ನ ಕೀಲಿ ಮುರಿದು ಮಧ್ಯದ ಬಾಟಲಿಗಳನ್ನು ಕಳ್ಳತನ ಮಾಡಿದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಬೆಳಿಗ್ಗೆ ಸಂಶಯದ ಹಿನ್ನಲೆಯಲ್ಲಿ ಸೆಟಲ್ಮೆಂಟ್ ಕಾಲೋನಿಯಲ್ಲಿ ದಾಳಿ ಮಾಡಿದಾಗ ಇಬ್ಬರು ಆರೋಪಿಗಳು ತಮ್ಮ ಮನೆಯಲ್ಲಿ ಕಳ್ಳತನ ಮಾಡಿದ 15 ಸಾವಿರ ರೂ. ಮೌಲ್ಯದ ಮಧ್ಯದ ಬಾಟಲಿಗಳು ಇರುವುದು ಕಂಡುಬಂದಿತು. ಆರೋಪಿಗಳು ಕೂಡ ಸ್ಥಳದಲ್ಲೇ ಇದ್ದಿದ್ದರಿಂದ ಬಂಧಿಸಲಾಯಿತು ಎಂದು  ಶಹರ ಪಿಎಸ್ಐ ಬಸವರಾಜ ಕೊಳ್ಳಿ ತಿಳಿಸಿದ್ದಾರೆ.
ಕದ್ದಿರುವ ಬಾಟಲಿಗಳನ್ನು ಜೋಳದ ಚೀಲದಲ್ಲಿ ತುಂಬಿಕೊಂಡು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಜಯಶ್ರೀ ಬಾರ್ನ ಸೆಟ್ರಸ್ ಕೀಲಿ ಮುರಿದು ಕಳ್ಳತನ ಮಾಡಿರುವುದಾಗಿ ಕಳ್ಳರು ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ.
ಸಿಪಿಐ ವಿಜಯ ಮುರಗುಂಡಿ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಎಎಸ್ಐ ಹಣಮಂತ ಹೂಗಾರ, ಸಿಬ್ಬಂದಿಯಾದ ಮಹಾಂತೇಶ ಲಮಾಣಿ, ಮಡಿವಾಳಪ್ಪ ಬೆಳ್ಳುಬ್ಬಿ, ಯಶವಂತ ಅರಬಗೋಳ, ಶಂಕರಪ್ಪ ಕಟ್ಟಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!