ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನಲ್ಲಿ ನೀರಿಗೆ ಬಿದ್ದ ಅಣ್ಣನ ಮಗನನ್ನು ಉಳಿಸಲು ಹೋಗಿ ಚಿಕ್ಕಪ್ಪನೂ ನೀರು ಪಾಲಾಗಿದ್ದಾರೆ.
ರಾಯಚೂರಿನ ಕೊರ್ತಕುಂದಾ ಕೆರೆಯಲ್ಲಿ ಸಲೀಂ ಹುಸೇನ್ ಸಾಬ್ ಹಾಗೂ ಅವರ ಅಣ್ಣನ ಮಗ ಯಾಸೀನ್ ರಫಿ ಕೆರೆಯ ಬಳಿ ತೆರಳಿದ್ದರು.
ಚಿಕ್ಕಪ್ಪ ನರೇಗಾ ಕೆಲಸ ಮಾಡುವ ವೇಳೆ ಕೆರೆಯಲ್ಲಿ ಕುಡಿಯಲು ನೀರು ತುಂಬಿಕೊಂಡು ಬರಲು ಬಂದ ಯಾಸಿನ್ ಕಾಲು ಜಾರಿ ಬಿದ್ದಿದ್ದಾನೆ. ಬಾಲಕ ಕೂಗಿದ್ದು, ಕೇಳಿಸಿಕೊಂಡ ಚಿಕ್ಕಪ್ಪ ಅಣ್ಣನ ಮಗನ ರಕ್ಷಣೆಗೆ ತೆರಳಿದ್ದು, ಇಬ್ಬರೂ ಮೃತಪಟ್ಟಿದ್ದಾರೆ.