ಸಿಡಿಲು ಬಡಿದು ಮೃತಪಟ್ಟ ಬಿಎಸ್ಎಫ್ ಯೋಧ: ಸ್ವಗ್ರಾಮದಲ್ಲಿ ಅಂತಿಮ ದರ್ಶನ

ಹೊಸದಿಗಂತ ಡಿಜಿಟಲ್ ಡೆಸ್ಕ್‌, ಬಾಗಲಕೋಟೆ :
ಬಿಎಸ್ಎಫ್ ನಲ್ಲಿ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ತಾಲ್ಲೂಕಿನ ಶಿರೂರ ಗ್ರಾಮದ ಯೋಧ ಅಶೋಕ ಮುಂಡಾಸ (41) ಜೂನ್ 5 ರಂದು ಸೇವೆ ಸಲ್ಲಿಸುತ್ತಿರುವಾಗಲೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತ ಯೋಧನ ಶವ ಶಿರೂರ ಗ್ರಾಮ ತಲುಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಶಿರೂರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಯೋಧನ ಶವವನ್ನು ಸಾರ್ವಜನಿಕ ಅಂತಿಮ‌ ದರ್ಶನಕ್ಕೆ ಇಡಲಾಗಿತ್ತು. ಸರದಿಯಲ್ಲಿ ನಿಂತು ಜನರು ಯೋಧನ ಅಂತಿಮ ದರ್ಶನ ಪಡೆದರು.
ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ‌ ಹಾಗೂ ಶಾಸಕ ವೀರಣ್ಣ ಚರಂತಿಮಠ,‌ ದೊಡ್ಡನಗೌಡ ಪಾಟೀಲ ಅವರು ಯೋಧನ ಅಂತಿಮ ದರ್ಶನ ಪಡೆದು ಯೋಧನ ಕುಟುಂಬದ ವರಿಗೆ ಸಾಂತ್ವನ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!