ಕಿಡಿಗೇಡಿಗಳ ವಿರುದ್ಧ ಬುಲ್ಡೋಜರ್ ಅಸ್ತ್ರ ಜಾರಿ ಮಾಡಿ: ಶ್ರೀ ಸಿದ್ದಲಿಂಗ ಸ್ವಾಮೀಜಿ

ಹೊಸದಿಗಂತ ವರದಿ, ಕಲಬುರಗಿ:

ರಾಜ್ಯದಲ್ಲಿ ಶಾಂತಿ ನೆಲೆಸಲು ಕಿಡಿಗೇಡಿಗಳ ವಿರುದ್ಧ ಬುಲ್ಡೋಜರ್ ಅಸ್ತ್ರ ಜಾರಿಗೆ ತಂದು,ಅವರನ್ನು ಮಟ್ಟ ಹಾಕಬೇಕೆಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ.

ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಧರ್ಮದ ದಂಗಲ್ ಹೆಚ್ಚಾಗುತ್ತಿದೆ. ಕಳೆದ ಮೂರು ತಿಂಗಳಿನಿಂದ ಮುಸ್ಲಿಂ ಕಿಡಿಗೇಡಿಗಳ ಗುಂಡಾ ವತ೯ನೆ ಮಿತಿಮೀರಿ ಹೋಗಿದೆ ಎಂದರು.

ಮಂಗಳೂರು,ಕಲಬುರಗಿ ನಂತರ ಇದೀಗ ಹುಬ್ಬಳ್ಳಿ ಯಲ್ಲಿ ಮುಸ್ಲಿಂ ಗುಂಡಾ ವತ೯ನೆ ಹೆಚ್ಚಾಗಿದೆ. ಇವರ ಮೇಲೆ ದೂರು ದಾಖಲಿಸಿ, ಕ್ರಮ ಕೈಗೊಂಡರೆ ಪ್ರಯೋಜನವಿಲ್ಲ. ಹೀಗಾಗಿ ಉತ್ತರ ಪ್ರದೇಶ ಮತ್ತು ಮದ್ಯ ಪ್ರದೇಶ ರಾಜ್ಯಗಳ ಮಾದರಿಯಂತೆ ಬುಲ್ಡೋಜರ್ ಮಾಡೆಲ್ ತರಬೇಕು ಎಂದ ಅವರು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಈ ಕಾನೂನು ಜಾರಿಗೆ ತರಬೇಕು ಎಂದು ಹೇಳಿದರು.

ಈ ವಿಷಯಗಳ ಬಗ್ಗೆ ಈಗಾಗಲೇ ಎಚ್.ಡಿ.ಕೆ. ಹಾಗೂ ಸಿದ್ದರಾಮಯ್ಯ ಮೌನಿ ಎಂದು ಟಿಕೆ ಮಾಡುತ್ತಿದ್ದಾರೆ. ಹೀಗಾಗಿ ಬೊಮ್ಮಾಯಿ ಅವರು ಬುಲ್ಡೋಜರ್ ಅಸ್ತ್ರವನ್ನು ಜಾರಿಗೆ ತರಬೇಕೆಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!