ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ರಸ್ತೆಯ ಉಪಗ್ರಹ ನಿಲ್ದಾಣದಿಂದ ಪ್ರವಾಹ ಪೀಡಿತ ವಯನಾಡ್ಗೆ ಗುರುವಾರ ಸಂಜೆಯಿಂದ ಬಸ್ ಸೇವೆ ಆರಂಭವಾಗಿದೆ.
ಕೇರಳ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರದ ಐದು ಬಸ್ಗಳು ಕಾರ್ಯಾಚರಣೆ ಆರಂಭಿಸಿವೆ. ಬೆಳಗ್ಗೆ 7 ರಿಂದ ಪ್ರತಿ ಗಂಟೆಗೆ ಬಸ್ಸುಗಳು ಹೊರಡುತ್ತವೆ. ಒಟ್ಟು 23 ಬಸ್ಗಳು ಬರಲಿವೆ.
ಮೈಸೂರು-ಸುಲ್ತಾನ್ ಬತ್ತೇರಿ ಮಾರ್ಗ ಮತ್ತು ಮೈಸೂರು-ಮಾನಂದವಾಡಿ ಮಾರ್ಗವಾಗಿ ವಯನಾಡ್ಗೆ ಬಸ್ಗಳು ಸಂಚರಿಸುತ್ತವೆ. ಎಲ್ಲಾ ಬಸ್ ಸೀಟುಗಳನ್ನು ಇಂದು ಮತ್ತು ನಾಳೆಗೆ ಕಾಯ್ದಿರಿಸಲಾಗಿದೆ.