ಹೊಸದಿಗಂತ ವರದಿ,ಬಳ್ಳಾರಿ:
ಭಾಜಪಾ ಹಿರೀಯ ಮುಖಂಡ, ಸಂಡೂರಿನ ಮಹಾರಾಜರಾದ ಕಾರ್ತೀಕೇಯ ಘೋರ್ಪಡೆ ಹಾಗೂ ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸೇರಿ ಇತರ ಪ್ರಯತ್ನದಿಂದ ಸುಮಾರು ವರ್ಷಗಳ ಜಿಲ್ಲೆಯ ನಾನಾ ಬೇಡಿಕೆಗಳಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ಭಾಜಪಾ ಸಂಡೂರ ಮಂಡಲ ಅಧ್ಯಕ್ಷ ಜಿ.ಟಿ.ಪಂಪಾಪತಿ ಅವರು ತಿಳಿಸಿದ್ದಾರೆ. ಗಣಿನಾಡು ಬಳ್ಳಾರಿ ಜಿಲ್ಲೆಗೆ ಆಡಳಿತಾತ್ಮಕವಾಗಿ ಒಲಿದು ಬಂದ ಯೋಜನೆಗಳಾದ, ಸಂಡೂರು ತಾಲೂಕಿನ ನಿಡಗುರ್ತಿ ಹಾಗೂ ಇತರೇ 60 ಜನ ವಸತಿಗಳಿಗೆ 131.21ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆ ಅನುಷ್ಠಾನಕ್ಕೆ ಅನುಮೋದನೆ, ಡಿಎಂಎಫ್ 58.13 ಹಾಗೂ ಕೇಂದ್ರ ಸರ್ಕಾರದಿಂದ 58.13 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 14.95 ಕೋಟಿ ರೂ.ವೆಚ್ಚದಲ್ಲಿ, ಸಂಡೂರು ತಾಲೂಕಿನ 60ಹಳ್ಳಿಯ ಸಾವಿರಾರು ಜನರಿಗೆ ಶಾಶ್ವತ ಶುದ್ದ ಕುಡಿವ ನೀರು ಸರಬರಾಜು, ಡಿಎಂಫ್, ಕೇಂದ್ರದ ಜಲ್ ಜೀವನ್ ಮಿಶನ್ ಹಾಗೂ ರಾಜ್ಯ ಸರ್ಕಾರದಿಂದ ಯೋಜನೆ ಅನುಷ್ಟಾನಕ್ಕೆ ನಮ್ಮ ನಾಯಕರು ಶ್ರಮಿಸಿದ್ದು, ಸರ್ಕಾರಕ್ಕೆ ಹಾಗೂ ನಾಯಕರಾದ ಕಾರ್ತೀಕೆಯ ಘೋರ್ಪಡೆ ಹಾಗೂ ಸಚಿವ ಶ್ರೀರಾಮುಲು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ತಿಳಿಸಿದ್ದಾರೆ.