ಹಾಯಲು ಬಂದ ಗೋವು: ಸಿಎಂ ಬೊಮ್ಮಾಯಿ ಬಚಾವ್

ಹೊಸದಿಗಂತ ವರದಿ, ವಿಜಯಪುರ:

ಸಿಎಂ ಬಸವರಾಜ ಬೊಮ್ಮಾಯಿಗೆ ಗೋವು ಹಾಯಲು ಬಂದಿರುವ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೊಡಗಾನೂರ ಗ್ರಾಮದಲ್ಲಿ ನಡೆದಿದೆ.
ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆ ಮೊದಲ ಹಂತ ಉದ್ಘಾಟನೆ ವೇಳೆಯಲ್ಲಿ ಗೋವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿ ಗೋವಿನ ಮೈಮೇಲೆ ಕೈಯಾಡಿಸಿ, ಈ ಗೋವಿನ ಪಕ್ಕದ ಮತ್ತೊಂದು ಗೋವನ್ನು ಮಟ್ಟಲು ಹೋದಾಗ, ಅದು ಗಲಿಬಿಲಿಗೊಂಡು ಹಾಯಿಲು ಬಂದಿದೆ. ಈ ವೇಳೆ ರೈತ ಗೋವನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷಣಾರ್ಧದಲ್ಲಿಯೇ ಬಚಾವ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!