ಹೊಸದಿಗಂತ ವರದಿ, ಹುಬ್ಬಳ್ಳಿ:
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ( ಪಿಎಫ್ ಐ) ಸಂಘಟನೆಯನ್ನು ಕೇಂದ್ರ ಸರ್ಕಾರದ ಬ್ಯಾನ್ ಮಾಡಿದ ಹಿನ್ನೆಲೆ ಜಿಲ್ಲಾ ಶ್ರೀರಾಮ ಸೇನಾ ಘಟಕದಿಂದ ಸಂಭ್ರಚಾರಣೆ ನಡೆಸಿದರು.
ಇಲ್ಲಿಯ ಹಳೇ ಹುಬ್ಬಳ್ಳಿ ವೃತ್ತದಲ್ಲಿ ಬುಧವಾರ ಶ್ರೀರಾಮ ಸೇನಾ ೨೫ ಕ್ಕೂ ಹೆಚ್ಚು ಕಾರ್ಯಕರ್ತರು ಪಟಾಕಿ ಹಾರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಧಿಕ್ಕಾರ ಧಿಕ್ಕಾರ ಪಿಎಫ್ ಐ ಗೆ ಧಿಕ್ಕಾರ ವಿರೋಧ ಹಾಗೂ ಭಾರತ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದರು.
ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಅಣ್ಣಪ್ಪ ದೇವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಟಕರ, ಬಸ್ಸು ದುರ್ಗದ, ಪ್ರವೀಣ ಮಾಳದಕರ, ನಾಗರಾಜ ಬುಡಕಟ್ಟಿ ಇದ್ದರು.