ಟಾಲಿವುಡ್‌ನಲ್ಲಿ ಬೇಬಮ್ಮ ಮಿಂಚಿಂಗ್:‌ ನಾಗಚೈತನ್ಯಗೆ ʻಥ್ಯಾಂಕ್ಯೂʼ ಹೇಳಲಿರುವ ಕೃತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಟಾಲಿವುಡ್‌ನಲ್ಲಿ ನಾಗ ಚೈತನ್ಯ ಹಾಗೂ ಕೃತಿಶೆಟ್ಟಿ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಚೈತು ಲವ್ ಸ್ಟೋರಿ ಮತ್ತು ಬಂಗಾರ್ರಾಜು ಚಿತ್ರಗಳ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್‌ಗಳನ್ನು ಹೊಡೆದ ಚೈತೂ ಥ್ಯಾಂಕ್ಯೂ ಚಿತ್ರದ ಮೂಲಕ ಮತ್ತೊಂದು ಹಿಟ್ ಹೊಡೆಯಲು ಸಿದ್ಧರಾಗಿದ್ದಾರೆ. ಕೃತಿ ಶೆಟ್ಟಿ ಕೂಡ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಸಾಲು ಸಾಲು ಹಿಟ್‌ ಕೊಟ್ಟಿದ್ದಾರೆ. ಬಂಗಾರ್ರಾಜು ಚಿತ್ರದಲ್ಲಿ ಚೈತು ಹಾಗೂ ಕೃತಿ ಜೋಡಿ ಪ್ರೇಕ್ಷಕರನ್ನು ಮೆಚ್ಚಿಸಿದ್ದು, ಮತ್ತೊಮ್ಮೆ ತೆರೆಗೆ ಬರಲಿದ್ದಾರೆ.

ನಾಗ ಚೈತನ್ಯ ಅವರ 22 ನೇ ಚಿತ್ರ ತಮಿಳು ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶಿಸಲಿದ್ದು, ತೆಲುಗು ಮತ್ತು ತಮಿಳಿನಲ್ಲಿ ದ್ವಿಭಾಷಾ ಚಿತ್ರವಾಗಿದೆ. ಶ್ರೀನಿವಾಸ ಸಿಲ್ವರ್ ಸ್ಕ್ರೀನ್ಸ್ ಬ್ಯಾನರ್ ನಲ್ಲಿ ಚಿತ್ತೂರಿ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಕೃತಿ ಶೆಟ್ಟಿ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಈ ಸಿನಿಮಾಗೆ ಮಾಸ್ ಡೈರೆಕ್ಟರ್ ಬೋಯಪಾಟಿ ಸೀನು ಚೈತು-ಕೃತಿಶೆಟ್ಟಿಗೆ ಕ್ಲಾಪ್‌ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ರಾಣಾ, ಶಿವ ಕಾರ್ತಿಕೇಯನ್, ನಿರ್ದೇಶಕ ಭಾರತಿರಾಜ, ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಮತ್ತು ನಿರ್ದೇಶಕ ಲಿಂಗು ಸ್ವಾಮಿ ಉಪಸ್ಥಿತರಿದ್ದರು. ಮತ್ತೊಮ್ಮೆ ಚೈತು-ಕೃತಿ ಶೆಟ್ಟಿ ಜೊತೆಯಾಗಿ ನಟಿಸಿರುವುದರಿಂದ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!