ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಬಳಸಿಕೊಂಡು ಕರೆಗಳ ಮೂಲಕ ಜನರನ್ನು ವಂಚಿಸುತ್ತಿದ್ದ ಐವರನ್ನು ಪಾಟ್ನಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಪಾಟ್ನಾದ ಖೇಮ್ನಿಚಕ್ ಪ್ರದೇಶದಲ್ಲಿ ಎರಡು ಬಿಎಚ್ಕೆ ಬಾಡಿಗೆ ಫ್ಲಾಟ್ನಲ್ಲಿ ಮಾಡಿಕೊಂಡು ಕರೆಗಳ ಮೂಲಕ ಜನರನ್ನು ಸಂಪರ್ಕಿಸುತ್ತಿದ್ದರು. ಅವರು ನಕಲಿ ಧನಿ ಫೈನಾನ್ಸ್ ಲಿಮಿಟೆಡ್ ಕಂಪನಿ ಹೇಳಿಕೊಂಡು ಬ್ಯಾಂಕ್ ಸಾಲಗಳು, ಕ್ರೆಡಿಟ್ ಕಾರ್ಡ್ಗಳು, ಜಿಎಸ್ಟಿ ಬಿಲ್ಗಳು, ವಿಮೆ, ಕೆವೈಸಿ ನವೀಕರಣಗಳು ಇತ್ಯಾದಿಗಳನ್ನು ನೀಡುವುದಾಗಿ ಕೇಳುತ್ತಿದ್ದರು.
ಆರೋಪಿಗಳನ್ನು ಗೌತಮ್ ಕುಮಾರ್, ಭರತ್ ಕುಮಾರ್, ಆಕಾಶ್ ಸಿನ್ಹಾ ಅಲಿಯಾಸ್ ಚೋಟು, ರಾಜೀವ್ ರಂಜನ್ ಮತ್ತು ಆಕಾಶ್ ಕುಮಾರ್ ಎಂದು ಗುರುತಿಸಲಾಗಿದೆ.
ಜನರನ್ನು ವಂಚಿಸಲು ಅವರು ಮಹೇಂದ್ರ ಸಿಂಗ್ ಧೋನಿಯ ಹೆಸರು ಮತ್ತು ಛಾಯಾಚಿತ್ರವನ್ನೂ ಬಳಸಿದ್ದಾರೆ ಎಂದು ಪಾಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮಾನವಜೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.
ವಿಚಾರಣೆ ವೇಳೆ ಜನರನ್ನು ವಂಚಿಸಲು ಕಂಪನಿ ನಡೆಸುತ್ತಿದ್ದ ಸ್ಥಳವನ್ನು ಬಹಿರಂಗಪಡಿಸಿದ್ದಾರೆ. ನಾವು ಅಲ್ಲಿ ದಾಳಿ ನಡೆಸಿದಾಗ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಲಾಯಿತು. 1.45 ಲಕ್ಷ ರೂ. ನಗದು, 10 ಮೊಬೈಲ್ ಫೋನ್ಗಳು, ಡೈರಿಗಳು, ಒಂದು ಬೈಕ್ ಮತ್ತು ಲ್ಯಾಪ್ಟಾಪ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಧಿಲ್ಲೋನ್ ಹೇಳಿದ್ದಾರೆ.