ಛತ್ರಪತಿ ಶಿವಾಜಿ ಜಯಂತಿ: ಬೃಹತ್ ಬೈಕ್ ರ್ಯಾಲಿ, ಶೋಭಾಯಾತ್ರೆ

ಹೊಸದಿಗಂತ ವರದಿ, ಅಂಕೋಲಾ:

ಇಲ್ಲಿಯ ಬೇಲೇಕೇರಿಯ ಛತ್ರಪತಿ ಶಿವಾಜಿ ಜಯಂತ್ಯೋತ್ಸವ ಸಮಿತಿ ವತಿಯಿಂದ  ಶಿವಾಜಿ ಜಯಂತಿ ನಿಮಿತ್ತ ಶನಿವಾರ ಬೃಹತ್ ಬೈಕ್ ರ್ಯಾಲಿ, ಶೋಭಾಯಾತ್ರೆ ನಡೆಯಿತು.
ಆಳೆತ್ತರದ ಭಗವಾ ಧ್ವಜದೊಂದಿಗೆ ದೇಶ ಮತ್ತು ಶಿವಾಜಿ ಮಹಾರಾಜರ ಪರ ಘೋಷಣೆ ಹಾಕುತ್ತ ನೂರಾರು ಬೈಕ್ ಮೂಲಕ ನಗರದಲ್ಲಿ ರ್ಯಾಲಿ ನಡೆಸಲಾಯಿತು.
ನಂತರ ಬೇಲೇಕೇರಿ  ಪ್ರವೇಶ ದ್ವಾರದಿಂದ ದತ್ತಾತ್ರೇಯ ದೇವಸ್ಥಾನದವರೆಗೆ ಡೊಳ್ಳು, ವಾದ್ಯ ಮೇಳದೊಂದಿಗೆ ಶೋಭಾಯಾತ್ರೆ ಜರುಗಿತು.
ಮುಖ್ಯವಕ್ತಾರೆ ಚೈತ್ರಾ ಕುಂದಾಪುರ, ನ್ಯಾಯವಾದಿ ನಾಗರಾಜ ನಾಯಕ, ಕೃಷಿ ಮುಖಂಡ ಶಿವರಾಮ ಗಾಂವಕರ್ ಸಹಿತ ಹಲವು ಗಣ್ಯರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!