ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ಗಡಿವಿವಾದದ ಕುರಿತು ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎನ್ನುತ್ತಿರುವ ರಾಹುಲ್ ಗಾಂಧಿ ಹಾಗು ಕಾಂಗ್ರೆಸ್ಸಿನವರಿಗೆ, ಯುಪಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಎ ಕೆ ಆ್ಯಂಟನಿಯವರ ಹಳೆ ಭಾಷಣವೊಂದನ್ನು ಹಂಚಿಕೊಳ್ಳುವ ಮೂಲಕ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಉತ್ತರ ನೀಡಿದ್ದಾರೆ.
“ಯಾರಾದರೂ ಈ ಸಂಸತ್ತಿನ ವೀಡಿಯೊವನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ತೋರಿಸಬಹುದೇ? ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ನೀತಿಯು ಗಡಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಿಲ್ಲ ಏಕೆಂದರೆ ಅದು ಅತ್ಯುತ್ತಮ ರಕ್ಷಣಾ ನೀತಿ ಎಂದು ಅವರು ನಂಬಿದ್ದರು” ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ. ಅವರು ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಅಂದಿನ ರಕ್ಷಣಾ ಸಚಿವರಾಗಿದ್ದ ಎಕೆ ಆ್ಯಂಟನಿಯವರು ಗಡಿ ಪ್ರದೇಶಗಳಲ್ಲಿ ಮೂಲ ಸೌಕರ್ಯಾಭಿವೃದ್ಧಿ ಕುರಿತು ಮಾತನಾಡುತ್ತ ʼಹೆಚ್ಚು ಅಭಿವೃದ್ಧಿ ಕಾಣದ ಗಡಿಗಳೇ ಹೆಚ್ಚು ಸುರಕ್ಷಿತವಾಗಿರುತ್ತವೆʼ ಎಂದಿದ್ದರು.
ಪ್ರಸ್ತುತ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಚೀನೀ ಸೈನಿಕರೊಂದಿಗೆ ಭಾರತೀಯ ಯೋಧರ ಘರ್ಷಣೆಯ ಕುರಿತು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಆಕ್ಷೇಪ ಎತ್ತಿರುವುದಕ್ಕೆ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ.
Can somebody show this Parliament video to Rahul Gandhi and Congres leaders?
Congress Policy since independence was not to develop the border areas because they believed that's the best defence policy!#NewIndia under @narendramodi Ji is providing infrastructure to border people pic.twitter.com/SxjtgJmdY4— Kiren Rijiju (@KirenRijiju) December 21, 2022