ಪೌರ ಸನ್ಮಾನ ಕಾರ್ಯಕ್ರಮ: ಕಾಂಗ್ರೆಸ್ ಸದಸ್ಯರಿಗೆ ಕೂರೋಕೆ ಕುರ್ಚಿ ಇಲ್ಲ!

ಹೊಸದಿಗಂತ ವರದಿ ಹುಬ್ಬಳ್ಳಿ:

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲಿಕೆಯ ಕಾಂಗ್ರೆಸ್ ಸದಸ್ಯರಿಗೆ ಕುಳಿತು ಕೊಳ್ಳಲು ಆಸನ ಅವಕಾಶವಿಲ್ಲದ ಕಾರಣ ಕೆಳಗಡೆ ಕುಳಿತು ವೀಕ್ಷಣೆಗೆ ಮುಂದಾದರು. ನಂತರ ಎಚ್ಚೆತ್ತ ಅಧಿಕಾರಿಗಳು ಆಸನ ವ್ಯವಸ್ಥೆ ಮಾಡಿದರು.

ಕಾಂಗ್ರೆಸ್ ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾರ್ಯಕ್ರಮ ನಡೆಯುತ್ತಿದೆ ಎಂದು ಕಾರ್ಯಕ್ರಮಕ್ಕೆ ಬರುವುದು ಬೇಡ ಎಂದು ನಿರ್ಧರಿಸಿದ್ದರು. ಆದರೆ ಬೆಳಗ್ಗೆ ಕಾಂಗ್ರೆಸ್ ಮುಖಂಡರು ಆದೇಶ ನೀಡಿದ ಬಳಿಕ ಕಾರ್ಯಕ್ರಮ ಭಾಗವಹಿಸಿದರು. ಅಷ್ಟೊತ್ತಿಗೆ ಸಮಾರಂಭಕ್ಕೆ ಏರ್ಪಡಿಸಿದ್ದ ಪೆಡಲ್ ನಲ್ಲಿ ಎಲ್ಲ ಆಸನ ಭರ್ತಿಯಾದ ಕಾರಣ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಮಾತನಾಡಿ, ರಾಷ್ಟ್ರಪತಿ ಗೌರವ ಸಲ್ಲಿಸುವುದು ಸಂತಸ ವಿಷಯವಾಗಿದೆ. ಆದರೆ ಬಿಜೆಪಿಯವರು ನಮ್ಮನ್ನು ಸಮಾರಂಭಕ್ಕೆ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಅಷ್ಟಾದರೂ ಪಕ್ಷದ ಮುಖಂಡರ ಆದೇಶ ಮೇರಿಗೆ ಕಾರ್ಯಕ್ರಮಕ್ಕೆ ಬಂದರೆ ಆಸನ ವ್ಯವಸ್ಥೆ ಸರಿಯಾಗಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!