ಹೊಸದಿಗಂತ ವರದಿ, ಕೊಪ್ಪಳ:
ಬಿಜೆಪಿ ತತ್ತ್ವಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸಗಳನ್ನು ಕಾರ್ಯಕರ್ತರು ಮಾಡುತ್ತಿದ್ದು, ಅವರಿಗಾಗಿ ಪಾರ್ಟಿ ಕಟ್ಟಡ ಕಟ್ಟಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾವೇಶ ದಲ್ಲಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ರೈತರ ಕಷ್ಟವನ್ನು ದೂರ ಮಾಡಿದ್ದಾರೆ. 2013 ರಲ್ಲಿ ಕೊಪ್ಪಳ ಏತ ನೀರಾವರಿ ಗೆ ಚಾಲನೆ ನೀಡದರು. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ನೀರಾವರಿ ಬಗ್ಗೆ ಚಿಂತೆ ಮಾಡಿಲ್ಲ. ನಾವು ಆರಂಭಿಸಿದ ಕಾಮಗಾರಿಯನ್ನು ಕಾಂಗ್ರೆಸ್ ಮುಂದುವರಿಸಲಿಲ್ಲ. ಕಾಂಗ್ರೆಸ್ ರೈತ ವಿರೋಧಿಯಾಗಿದೆ. ಏತ ನೀರಾವರಿಯ ಎರಡನೇ ಹಂತದ ಕಾಮಗಾರಿಗೆ 1750 ಕೋಟಿ ರೂ. ಬಿಎಸ್ವೈ ನೀಡಿದರು. ನಂತರ ಬೊಮ್ಮಾಯಿ ಹಣ ನೀಡಿದ್ದಾರೆ. ನೀರಾವರಿ ಯೋಜನೆ ಶಕ್ತಿ ನೀಡಲಾಗಿದೆ ಎಂದರು.
ಆಯುಷ್ಮಾನ್ ಭಾರತ್ ಯೋಜನೆಯನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಲಾಗಿದೆ. ಕಿಸಾನ್ ಸನ್ಮಾನ್ ಯೋಜನೆಯಿಂದ ರೈತರ ಖಾತೆಗೆ ಹಣ ಹಾಕಲಾಗುತ್ತಿದೆ. ಮಗುವಿನಿಂದ ಹಿಡಿದು ವಯೋ ವೃದ್ಧರವರಿಗೂ ಹಲವು ಯೋಜನೆಗಳನ್ನು ಬಿಜೆಪಿ ಜಾರಿ ಮಾಡಿದೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ