ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ. ಜನ್ಮದಿನದಂದು ಸಿಎಂ ಬೊಮ್ಮಾಯಿ ತಂದೆ-ತಾಯಿಯ ಆಶೀರ್ವಾದ ಪಡೆದಿದ್ದಾರೆ.
ಹುಬ್ಬಳ್ಳಿಯ ನಂದಿ ಬಡಾವಣೆಯ ತಂದೆ-ತಾಯಿ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಸಿಎಂ ಬೊಮ್ಮಾಯಿ ಅವರ ಜತೆಗೆ ಸಚಿವ ಗೋವಿಂದ ಕಾರಜೋಳ ಕೂಡ ಸಮಾಧಿಗೆ ಪೂಜೆ ನೆರವೇರಿಸಿದ್ದಾರೆ.
ತಂದೆತಾಯಿಯನ್ನು ನೆನದು ಭಾವುಕರಾದ ಸಿಎಂ, ಆಶೀರ್ವದಿಸುವಂತೆ ಕೋರಿಕೊಂಡಿದ್ದಾರೆ. ಸಮಾಧಿಗೆ ಭೇಟಿ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಿಎಂ ಜನ್ಮದಿನ ಹಿನ್ನೆಲೆ ರಾಜಕೀಯ ಗಣ್ಯರು ಜನ್ಮದಿನದ ಶುಭಾಷಯಗಳನ್ನು ಕೋರಿದ್ದಾರೆ.