ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಪರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬ್ಯಾಟ್ ಬಿಸಿದ್ದಾರೆ .
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ಪಕ್ಷ ಬಿಡಲ್ಲ ಅನ್ನೋ ವಿಶ್ವಾಸ ನನಗಿದೆ. ಅವನು ಪಕ್ಷ ಬಿಟ್ಟರೂ ನಾನು ಅವನ ಮನೆಗೆ ಹೋಗ್ತೇನೆ. ರಾಜಕೀಯ ಬೇರೆ, ವೈಯಕ್ತಿಕ ಬೇರೆ. ಅವನು ಎಲ್ಲೇ ಇದ್ದರು ನನ್ನ ಸ್ನೇಹಿತ. ಅವನು ಬೇರೆ ಪಕ್ಷಕ್ಕೆ ಹೋದರೂ ನನಗೆ ಸ್ನೇಹಿತನಾಗೇ ಇರುತ್ತಾನೆ.ಅವನಿಗೆ ಕೋಪ ಕಡಿಮೆ ಆದ ಮೇಲೆ ಹೋಗಿ ಮಾತಾಡ್ತೇನೆ ಎಂದರು.