ಹೊಸದಿಗಂತ ವರದಿ, ಕಲಬುರಗಿ:
ಯುದ್ದ ಮಾಡುವುದು ಅಥವಾ ಬಿಡುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಲ್ಲ. ಯುದ್ಧದ ಪರವಾಗಿ ನಾನಿಲ್ಲ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಅವರಿಗೆ ನಾಚಿಗೆಯಾಗಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಸ್ಲಿಂ ಹಾಗೂ ಪಾಕಿಸ್ತಾನದ ಏಜೆಂಟ್ ಆಗಿದ್ದಾರೆ.ಮಾನ ಮರ್ಯಾದೆ ಏನಾದರೂ ಇದೆಯಾ. ಅಮಾಯಕ ಹಿಂದುಗಳನ್ನು ಗುಂಡಿಟ್ಟು ಕೊಂದವರ ಪರ ಈ ರೀತಿ ಮಾತನಾಡುತ್ತಾರೆ ಎಂದರೆ,ಹಿಂದುಗಳು ಯಾರು ಓಟ್ ಹಾಕಿಲ್ವಾ ಇವರಿಗೆ ಎಂದು ಪ್ರಶ್ನಿಸಿದ ಅವರು,ಪಾಕಿಸ್ತಾನದ ಮೇಲೆ ಯುದ್ದ ಮಾಡಬೇಕೋ ಮಾಡಬಾರದೋ ಅಂತ ತಿರ್ಮಾನ ಮಾಡುವುದು ಈ ದೇಶದ ಪ್ರಧಾನಿ, ರಾಷ್ಟ್ರಪತಿ ಹಾಗೂ ಸೈನಿಕರು ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷಕ್ಕೆ ದೇಶ ಧರ್ಮ ಮುಖ್ಯವಿಲ್ಲ.ಕಾಂಗ್ರೆಸ್ ಅಂದ್ರೆನೇ ಸಾಬರ ಪಾರ್ಟಿ.ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಅಯೋಗ್ಯರೇ ತುಂಬಿ ಹೋಗಿದ್ದಾರೆ.ಕಾಂಗ್ರೆಸ್ ನಾಯಕರ ಮಾತು ಕೇಳಿದರೆ ಅವರು ಪಾಕಿಸ್ತಾನದ ಪರವಾಗಿದ್ದಾರೆ ಎನಿಸುತ್ತದೆ.ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿನ ಹಿಂದುಗಳ ಮೇಲಿನ ಹಲ್ಲೆ, ಲವ್ ಜಿಹಾದ್, ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಬಗ್ಗೆ ಮಾತನಾಡಲಿ ಎಂದರು.