ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲುಗಾಡಿ ಡಿಕ್ಕಿ ಹೊಡೆದು ಕುಂಬಳೆ ಕರಾವಳಿ ಪೊಲೀಸ್ ಠಾಣೆಯ ಸ್ರಾಂಕ್, ಕೇರಳದ ಆಲಪ್ಪುಳ ಜಿಲ್ಲೆಯ ಚುಗಂ ಕಪ್ಪಪುರಂ ಕೈನಕಾರಿಪಳ್ಳಿ ತುರುತ್ತಿ ಮುಲ್ಲಯಕ್ಕಲ್ ಆಲ ಪರಂಬಿಲ್ ಉಣ್ಣಿಕೃಷ್ಣನ್ (೨೮) ಸಾವನ್ನಪ್ಪಿದ್ದಾರೆ.
ಕುಂಬಳೆ ಕರಾವಳಿ ಪೊಲೀಸ್ ಠಾಣೆಯ ಇಂಟರ್ಸೆಪ್ಟರ್ ಬೋರ್ಚ್ನ ಸ್ರಾಂಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅವರು ಭಾನುವಾರ ಕಾಸರಗೋಡಿನ ಉಪ್ಪಳ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದು ಮೂಸೋಡಿಯಲ್ಲಿರುವ ಕರಾವಳಿ ಪೊಲೀಸ್ ಠಾಣೆಗೆ ರೈಲು ಹಳಿ ಮೂಲಕ ನಡೆದು ಹೋಗುತ್ತಿದ್ದರು. ಈ ವೇಳೆ ಮಂಗಳೂರು ಭಾಗದಿಂದ ಆಗಮಿಸಿದ ರೈಲು ಅವರಿಗೆ ಡಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರ ಸಹಾಯದಿಂದ ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ಸಾವು ಸಂಭವಿಸಿತು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.