ಹೊಸ ದಿಗಂತ ವರದಿ, ನಾಪೋಕ್ಲು:
ಕಾಲೇಜು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ (ಕಬ್ಬಿನಕಾಡು) ಯವಕಪಾಡಿ ಗ್ರಾಮದ ನಿವಾಸಿ ಎಂ. ಸುಬ್ಬಯ್ಯ ಎಂಬವರ ಪುತ್ರ ಎಂ.ಎಸ್. ತೀರ್ಥಕುಮಾರ್ (19) ಸೋಮವಾರ ಸಂಜೆ ತಮ್ಮ ಮನೆಯ ಸಮೀಪದ ಹೊಳೆಯ ಬದಿಯಲ್ಲಿ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ಸಾವಿಗೆ ಅನಾರೋಗ್ಯ ಕಾರಣ ಎಂದು ತಿಳಿದು ಬಂದಿದೆ. ತೀರ್ಥ ಕುಮಾರ್ ನಾಪೋಕ್ಲು ಪದವಿ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿ. ಈ ಸಂಬಂಧ ತಂದೆ ನೀಡಿದ ದೂರಿನನ್ವಯ ನಾಪೋಕ್ಲು ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.