ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಕಾಂಗ್ರೆಸ್: ನಳಿನ್ ಕುಮಾರ್ ಕಟೀಲ್

ಹೊಸದಿಗಂತ ವರದಿ, ಕಲಬುರಗಿ:

ಹುಬ್ಬಳ್ಳಿಯಂತಹ ಘಟನೆಗಳನ್ನು ಸೃಷ್ಟಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು, ಇಡೀ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ನಗರದ ಡಿವೈನ್ ಪ್ಯಾಲೇಸ್, ನಲ್ಲಿ ಹಮ್ಮಿಕೊಂಡಿದ್ದ ನೂತನ ಜಿಲ್ಲಾ ಕಾಯಾ೯ಲಯ ಕಟ್ಟಡ ಶಿಲಾನ್ಯಾಸ ಮತ್ತು ಭೂಮಿ ಪೂಜೆ ನೆರವೆರಿಸಿ,ಕಾಯ೯ಕತ೯ರನ್ನು ಉದ್ದೇಶಿಸಿ ಮಾತನಾಡಿದರು.

7 ಜಿಲ್ಲೆಗಳ ಕಾಯಾ೯ಲಯಗಳು ಸ್ವತಂತ್ರವಾಗಿ ಇದ್ದು, 11 ಕಾಯಾ೯ಲಯ ಕಟ್ಟಡ ನಿರ್ಮಾಣ ಹಂತದಲ್ಲಿವೆ. ಇನ್ನೂ ಮುಂದೆ ಬರುವಂತಹ ದಿನಗಳಲ್ಲಿ ರಾಜ್ಯದ 32 ಬಿಜೆಪಿ ಪಕ್ಷದ ಕಟ್ಟಡಗಳು ಸ್ವತಂತ್ರವಾಗಿ ತನ್ನ ಕಾಯ೯ ಚಟುವಟಿಕೆ ನಡೆಸಲಿವೆ ಎಂದರು.

ಬಿಜೆಪಿ ಕಾಯ೯ಕತ೯ನಿಗೆ ಕಾಯಾ೯ಲಯ ಶ್ರದ್ಧಾ ಕೇಂದ್ರವಿದ್ದಂತೆ. ನಮ್ಮ ಪಕ್ಷದಲ್ಲಿ ವ್ಯಕ್ತಿಗಳಿಗೆ ಪೂಜೆ ಮಾಡುವುದಿಲ್ಲ. ಬದಲಾಗಿ ಸಿದ್ದಾಂತಗಳಿಗೆ ಪೂಜೆ ಮಾಡುತ್ತೇವೆ. ಹೀಗಾಗಿ ಪ್ರತಿಯೊಬ್ಬ ಕಾಯ೯ಕತ೯ನೂ ತನ್ನ ಕಾಯಾ೯ಲಯವೆಂದು ತಿಳಿದು,ಕಾಯಾ೯ಲಯ ನಿಮಾ೯ಣಕ್ಕೆ ದೇಣಿಗೆ ನೀಡಬೇಕು ಎಂದು ಕರೆ ನೀಡಿದರು.

ಬಿಜೆಪಿ ಸಂಘಟನಾತ್ಮಕವಾಗಿ ಸವ೯ವ್ಯಾಪಿ, ಸವ೯ಸ್ಪಶಿ೯ಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಆಡಳಿತ ನೋಡಿದ್ದೇವೆ. ಕಾಂಗ್ರೆಸ್ ಪರಿಸ್ಥಿತಿ ಯಾವ ಮಟ್ಟಿಗೆ ಹೋಗಿದೆ ಎಂದರೆ ವಿರೋಧ ಪಕ್ಷದ ಸ್ಥಾನದಲ್ಲಿ ಸಹ ಇರಲು ನಾಲಾಯಕ ಆಗಿದೆ ಎಂದರು.

ಕಾಂಗ್ರೆಸ್ ಮುಕ್ತ ಭಾರತವಾಗಿ ಹೋಗಿದೆ. ಇನ್ನೇನಿದ್ದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕಲಬುರಗಿ ಮಾಡುವುದೊಂದೆ ಬಾಕಿ ಉಳಿದಿದೆ ಎಂದ ಅವರು ಪ್ರಿಯಾಂಕ್ ಖಗೆ೯,ಅಜಯ್ ಸಿಂಗ್ ಅವರನ್ನು ಮನೆಗೆ ಕಳುಹಿಸುವ ಮೂಲಕ ಕಾಂಗ್ರೆಸ್ ಮುಕ್ತ ಕಲಬುರಗಿ, ಗೆ ಕಾಯ೯ಕತ೯ರು ಪಣ ತೊಡಬೇಕಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!