ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್‌ಗಿಲ್ಲ: ಬಿ.ವೈ.ವಿಜಯೇಂದ್ರ

ಹೊಸದಿಗಂತ ವರದಿ ಕಲಬುರಗಿ:

70 ವಷ೯ಗಳ ಕಾಲ ಸುದೀರ್ಘವಾಗಿ ದೇಶದಲ್ಲಿ ಆಡಳಿತ ಮಾಡಿರುವ ಕಾಂಗ್ರೆಸ್ ಪಕ್ಷ,ಅದೇ ಪಕ್ಷದ ಮುಖಂಡರು ಮಾಡಿದ ಭ್ರಷ್ಟಾಚಾರದಿಂದಲೇ ಇಂದು ಅಧೋಗತಿಗೆ ಬಂದು ತಲುಪಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆ 300ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಇಂದು 50/60 ಸ್ಥಾನಗಳನ್ನು ಗೆದ್ದು ದಾರುಣ ಸ್ಥಿತಿಗೆ ತಲುಪಿದೆ ಎಂದರು.

ಇನ್ನೂ ಶಾಸಕ ಪ್ರಿಯಾಂಕ್ ಖಗೆ೯ ಅವರ ಬಿಜೆಪಿ ಬ್ರೋಕರ್ ಪಾಟಿ೯ ಮತ್ತು ವಿಧಾನ ಸೌಧ ಶಾಫೀಂಗ ಮಾಲ್ ಮಾಡಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗೇ ಆಗಿದೆ.ಹೀಗಾಗಿ ಭ್ರಷ್ಟಾಚಾರ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ಇಲ್ಲ ಎಂದು ತಿರುಗೇಟು ನೀಡಿದರು.

ಚುನಾವಣಾ ಸಮೀಸುತ್ತಿದ್ದಂತೆ,ವಿಪಕ್ಷಗಳ ಈ ರೀತಿ ಟಿಕೆ ಟಿಪ್ಪಣಿಗಳು ಸಾಮಾನ್ಯ. ರಾಜ್ಯದ ಜನ ವಿದ್ಯಾವಂತರು ಬರುವಂತಹ ದಿನಗಳಲ್ಲಿ ಅವರೇ ತೀಮಾ೯ನ ಮಾಡಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!