ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ‘ಸಂವಿಧಾನವೇ ಸರ್ವೋಚ್ಚ’ ಎಂಬ ಮಾತನ್ನು ಹೇಳಿದ್ದಾರೆ. ಇತ್ತೀಚೆಗಷ್ಟೇ ʻಪಾರ್ಲಿಮೆಂಟ್ ಸುಪ್ರೀಂʼ ಎಂಬುದಾಗಿ ಉಪಾಧ್ಯಕ್ಷ ಜಗದೀಪ್ ಧನಖರ್ ಅವರು ನೀಡಿದ ಹೇಳಿಕೆಗೆ ಚಿದಂಬರಂ ತಿರುಗೇಟು ನೀಡಿದ್ದಾರೆ. ಸಂವಿಧಾನಕ್ಕಿಂತ ಸರ್ವಶ್ರೇಷ್ಠವಾದದ್ದು ಯಾವುದೂ ಇಲ್ಲ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಉಪರಾಷ್ಟ್ರಪತಿ ನೀಡಿರುವ ಹೇಳಿಕೆ ಸಂವಿಧಾನವನ್ನು ಪ್ರೀತಿಸುವ ಪ್ರತಿಯೊಬ್ಬ ನಾಗರಿಕರಿಗೂ ಮುಂಬರುವ ಅಪಾಯಗಳ ಬಗ್ಗೆ ಎಚ್ಚರಿಕೆಯಾಗಿದೆ ಎಂದು ಚಿದಂಬರಂ ಅಭಿಪ್ರಾಯಪಟ್ಟರು. ಸಂಸತ್ತಿನಲ್ಲಿ ಬಹುಮತವಿದ್ದರೆ, ಸಂಸದೀಯ ವ್ಯವಸ್ಥೆಯನ್ನು ಅಧ್ಯಕ್ಷೀಯ ವ್ಯವಸ್ಥೆಗೆ ಬದಲಾಯಿಸುವುದು ಮತ್ತು ರಾಜ್ಯಗಳ ವಿಶೇಷ ಶಾಸಕಾಂಗ ಅಧಿಕಾರವನ್ನು ತೆಗೆದುಹಾಕುವುದು ಮುಂತಾದ ತಿದ್ದುಪಡಿಗಳನ್ನು ಜಾರಿಗೊಳಿಸಿದರೆ ಅವು ಮಾನ್ಯವಾಗುತ್ತವೆಯೇ? ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ನಂತರವೂ ಕೇಂದ್ರ ಸರ್ಕಾರವು ಹೊಸ ಮಸೂದೆಯನ್ನು ಮಂಡಿಸುವುದನ್ನು ತಡೆಯಲಿಲ್ಲ. ಭಾರತೀಯ ಸಂವಿಧಾನದ ಮೂಲ ರಚನೆಯನ್ನು ಹೊಡೆದು ಹಾಕುವ ಅಗತ್ಯವಿಲ್ಲ ಎಂದರು.