ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇರೆಲ್ಲೋ ನಡೆಯಲಿದ್ದ ಸ್ಫೋಟ, ಆಕಸ್ಮಿಕವಾಗಿ ಮಂಗಳೂರು ನಗರದ ನಾಗುರಿ ಪರಿಸರದಲ್ಲಿ ನಡೆಯಿತೇ?
ಹೀಗೊಂದು ಅನುಮಾನವನ್ನು ಶನಿವಾರ ಸಂಜೆ ಆಟೋ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಸ್ಫೋಟ ಪ್ರಕರಣ ಹುಟ್ಟುಹಾಕಿದೆ. ಶಂಕಿತ ಭಯೋತ್ಪಾದಕ ಶನಿವಾರ ಸಂಜೆ ಮಂಗಳೂರಿನ ಪಂಪ್ವೆಲ್ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋದಲ್ಲಿ ಪ್ರಯಾಣಿಸುತ್ತಿದ್ದು, ಕೈಯಲ್ಲಿ ಕುಕ್ಕರ್ ಹಿಡಿದುಕೊಂಡಿದ್ದ. ಅಟೋ ಕಂಕನಾಡಿ ಪೊಲೀಸ್ ಠಾಣೆಯ ಸಮೀಪ ತಲುಪುತ್ತಿದ್ದಂತೆಯೇ ಕುಕ್ಕರ್ ಸ್ಫೋಟಗೊಂಡಿದೆ. ಈ ರಸ್ತೆಯಲ್ಲಿ ಹಂಪ್ಸ್ ಇದ್ದಿದ್ದು, ಆಟೋ ಹಂಪ್ಸ್ನಲ್ಲಿ ‘ಕುಣಿದಾಡಿದ’ ವೇಳೆ ಕುಕ್ಕರ್ ಬಾಂಬ್ ಅಲ್ಲೇ ಸ್ಫೋಟಗೊಂಡಿರಬಹುದು ಎಂಬ ಶಂಕೆ ವ್ಯಾಪಕವಾಗಿ ಎಲ್ಲರನ್ನೂ ಕಾಡುತ್ತಿದೆ.