ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕು ಉಲ್ಭಣಿಸುತ್ತಿರೋ ಹಿನ್ನೆಲೆ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್, ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ.
ಇದರ ಜೊತೆಗೆ ಕೊರೋನಾ ಹೆಚ್ಚಾಗ್ತಿರೋದ್ರಿಂದ ಚುನಾವಣಾ ಱಲಿಗಳ ಮೇಲೆ ನಿಷೇಧ ಹೇರುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸಿಬಲ್ ಕೇಳಿದ್ದಾರೆ.
‘ಚೇತರಿಕೆಗಿಂತ, ಸೋಂಕು ಹರಡುತ್ತಿರುವ ವೇಗ ಹೆಚ್ಚಾಗಿದೆ. ಮೋದಿಜಿ: ನ್ಯಾಷನಲ್ ಹೆಲ್ತ್ ಎಮರ್ಜೆನ್ಸಿ ಘೋಷಿಸಿ. ಚುನಾವಣಾ ಆಯೋಗ: ಎಲೆಕ್ಷನ್ ಱಲಿಗಳನ್ನ ನಿಷೇಧಿಸಿ. ಕೋರ್ಟ್ಗಳೇ: ಜನರ ಪ್ರಾಣವನ್ನ ಕಾಪಾಡಿ’ ಎಂದು ಸಿಬಲ್ ಟ್ವೀಟ್ ಮಾಡಿದ್ದಾರೆ.
COVID-19
Infections faster than recoveriesModiji :
Declare a National Health EmergencyElection Commission :
Declare a moratorium on election ralliesCourts :
Protect people’s lives— Kapil Sibal (@KapilSibal) April 18, 2021