ದಿಗಂತ ವರದಿ ಕಲಬುರಗಿ:
ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರ ಸರಕಾರಿ ಕಾರು ಜಪ್ತಿ ಮಾಡುವ ಆದೇಶವನ್ನು ಕೋಟ ನೀಡಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕಲ್ಲಪ್ಪ ಮೇತ್ರೆ ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಈ ಆದೇಶ ಬಂದಿದೆ.
ಭೀಮಾ ಎತ ನೀರಾವರಿ ಯೋಜನೆಯಡಿ ಕಲ್ಲಪ್ಪ ಮೇತ್ರೆ ಎಂಬುವವರ 33 ಗುಂಟೆ ಜಮೀನು 2008ರಲ್ಲಿ ಮುಳುಗಡೆಯಾಗಿತ್ತು. 7.39.632 ಪರಿಹಾರ ನೀಡುವಂತೆ ಕೋಟ೯ ಆದೇಶ ಆಗಿತ್ತ. ಆದರೆ ಇಲ್ಲಿಯವರೆಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕಾರು ಜಪ್ತಿಗೆ ಕೋಟ೯ ಆದೇಶ ನೀಡಿದೆ.
ಇನ್ನೂ ಕೋಟ೯ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ಸರಕಾರಿ ಕಾರಿನ ಜಪ್ತಿಗೆ ಕೋಟ೯ ಸಿಬ್ಬಂದಿ ಮತ್ತು ವಕೀಲರು ಬಂದಿದ್ದಾರೆ.