ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುರುವಾರ ರಾತ್ರಿ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಹಿಂದು ಕಾರ್ಯಕರ್ತ ಸುಹಾಸ್ ಮೃತದೇಹದ ಅಂತಿಮ ಯಾತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ಹೆಜ್ಜೆಹಾಕಿತು.
ಮಂಗಳೂರಿನ ಖಾಸಗಿ ಆಸ್ಪತ್ರೆ ಆವರಣದಿಂದ ಹೊರಟ ಸುಹಾಸ್ ಅಂತಿಮ ಯಾತ್ರೆ ಬಿ.ಸಿ. ರೋಡ್ ಮಾರ್ಗವಾಗಿ ಕಾರಿಂಜದ ಅವರ ನಿವಾಸಕ್ಕೆ ತೆರಳಿತು.
ದಾರಿಯುದ್ದಕ್ಕೂ ಹಿಂದು ಕಾರ್ಯಕರ್ತರು, ನಾಗರಿಕರು ಸುಹಾಸ್ನ ಅಂತಿಮ ದರುಶನ ಪಡದು ಗೌರವ ಸಲ್ಲಿಸಿದರು. ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಗಿತ್ತು.