ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ರಾಜ್ಯದ ದೊಡ್ಡ ಮಾಸ್ಟರ್ ಮೈಂಡ್ ಉಗ್ರ ಸಿಟಿ ರವಿ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ವಿವಾದಿತ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿನ್ ಮಿಗಾ, ಕುಕ್ಕರ್ ಸ್ಫೋಟಿಸಿದ್ದ ಶಾರಿಕ್ ಗಿಂತಲೂ ಸಿ.ಟಿ.ರವಿ ಒಂದು ಕೈ ಮೇಲು. ರಾತ್ರೋರಾತ್ರಿ ದತ್ತಪೀಠದಲ್ಲಿ ಗೋರಿ ನಾಶ ಮಾಡಿದ್ದಾರೆ. ಭಯದ ವಾತಾವರಣ ನಿರ್ಮಿಸಲು ಗೋರಿ ನಾಶಮಾಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಿ.ಟಿ.ರವಿ ಬಾಯಿಗೆ ಬಂದಂತೆ ಮಾತುಗಳನ್ನು ಆಡಿದ್ದಾರೆ. ನಾವು ಹಿಂದೂಗಳೆ ಕೈಗೆಬಳೆತೊಟ್ಟುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.