ದರ್ಗಾ ತೆರವು ಕಾರ್ಯಾಚರಣೆ ಖಂಡನೀಯ: ಮಾಜಿ ಸಚಿವ ಹಿಂಡಸಗೇರಿ

ಹೊಸದಿಗಂತ ವರದಿ, ಹುಬ್ಬಳ್ಳಿ:
ಭೈರಿದೇವರಕೊಪ್ಪದ ದರ್ಗಾವನ್ನು ಸ್ಥಳಾಂತರ ಮಾಡುವ ಕುರಿತು ಸ್ಥಳೀಯ ಆಡಳಿತ ಮತ್ತು ಸಚಿವರಿಗೆ ಮನವಿ ಮಾಡಿದರು ಸ್ಪಂದಸದೆ ತೆರವು ಕಾರ್ಯಾಚರಣೆ ಕೈಗೊಂಡಿರುವುದು ಖಂಡನೀಯ ಎಂದು ಮಾಜಿ ಸಚಿವ ಎ.ಎಮ್.ಹಿಂಡಸಗೇರಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್.ಟಿ.ಎಸ್ ಯೋಜನೆ ಸಂಪೂರ್ಣಗೊಂಡರು ಸಹ ಬಿಡದೆ ನೂರಾರು ವರ್ಷದ ಹಳೆಯ ದರ್ಗಾವನ್ನು ಕೆಡವಲು ಆದೇಶ ಕೊಟ್ಟಿದ್ದಾರೆ ಎಂದು ಬೇಸರಿಸಿದರು.
ಹು-ಧಾ ಅವಳಿನಗರ ಶಾಂತಿ, ಸೌಹಾರ್ದತೆಯಿಂದ ಇದೆ. ಇದಕ್ಕೆ ಅಡ್ಡಿ ಉಂಟು ಮಾಡುವ ಕೆಲಸವನ್ನು ಕೆಲವು ಕಾಣದ ಕೈಗಳು ಮಾಡುತ್ತಿವೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!