ಹೊಸದಿಗಂತ ವರದಿ, ಹುಬ್ಬಳ್ಳಿ:
ಹಿಂದೂ ಮುಸ್ಲಿಮರ ನಡುವೆ ಜಗಳ ಹಚ್ಚುವ ಉದ್ದೇಶದಿಂದ ಇಲ್ಲಿನ ಭೈರಿದೇವರಕೊಪ್ಪದ ಬಳಿಯಿರುವ ದರ್ಗಾ ತೆರುವುಗೊಳಿಸಲಾಗುತ್ತಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಹನ ಸಂಚಾರಕ್ಕಾಗಲಿ, ಸಾರ್ವಜನಿಕ ಓಡಾಟಕ್ಕಾಗಲಿ ದರ್ಗಾವಿರುವುದರಿಂದ ಯಾವುದೇ ತೊಂದರೆ ಯಾಗಿರಲಿಲ್ಲ. ಚುನಾವಣೆ ಸಮೀಪಿಸುತ್ತಿರುವುದುದರಿಂದ ರಾಜಕೀಯ ಪ್ರೇರಿತವಾಗಿ ತೆರವು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಣಕಲ್ ಸಿದ್ದಪ್ಪಜ್ಜನ ಗುಡಿ ಎದುರು ಪ್ಲೈಓವರ್ ನಿರ್ಮಿಸಿದಂತೆ, ಇಲ್ಲಿಯೂ ನಿರ್ಮಿಸಿ ದರ್ಗಾವನ್ನು ಉಳಿಸಬಹುದಿತ್ತು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾವ ಮಾಡುತ್ತೇನೆ ಎಂದು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ